ಸಿಎಂ ಇಬ್ರಾಹಿಂ ಬಾಯಿ ಚಪಲಕ್ಕೆ ಮಾತನಾಡ್ತಾರೆ: ಸಂಗಣ್ಣ ಕರಡಿ ಟಾಂಗ್

Public TV
1 Min Read

ಕೊಪ್ಪಳ: ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಬಾಯಿ ಚಪಲಕ್ಕೆ ಮಾತನಾಡ್ತಾರೆ ಎಂದು ಸಂಸದ ಕರಡಿ ಸಂಗಣ್ಣ ವ್ಯಂಗ್ಯವಾಡಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕರು ಕಾಂಗ್ರೆಸ್ಸಿಗೆ ಸೇರ್ಪಡೆ ಆಗ್ತಾರೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ. ಆದ್ರೆ ಇಬ್ರಾಹಿಂ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶ ಇಲ್ಲ. ನಮ್ಮ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು. ಸಿಎಂ ಇಬ್ರಾಹಿಂ ಜನರ ಮೂಡ್ ಬದಲಾವಣೆ ಮಾಡಲು ಏನೇನೋ ಹೇಳ್ತಾರೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸುಮ್ಮನೆ ಭ್ರಮೆಯಲ್ಲಿ ಮಾತಾಡ್ತಾರೆ ಎಂದು ಟಾಂಗ್ ಕೊಟ್ಟರು. ಜೊತೆಗೆ ಜೆಡಿಎಸ್‍ನ ಕೆಲವು ಶಾಸಕರು ಬಿಜೆಪಿ, ಕೆಲವು ಶಾಸಕರು ಕಾಂಗ್ರೆಸ್ಸಿಗೆ ಹೋಗಬಹುದು. ಆದರೆ ಏನಾಗುತ್ತೆ ಅಂತ ಕಾದು ನೋಡಬೇಕು ಎಂದು ಹೇಳಿದರು.

ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಿಂದ ಭಾರತಕ್ಕೆ ಲಾಭವಾಗಲಿದ್ದು, ಟ್ರಂಪ್ ಭೇಟಿಗೆ ಕಾಂಗ್ರೆಸ್ ನಾಯಕರ ವಿರೋಧ ಮಾಡದೆ ಏನು ಮಾಡುತ್ತಾರೆ? ಮೋದಿ ಅವರನ್ನು ಹಾಡಿ ಹೋಗುಳುತ್ತಾರಾ? ಎಂದು ಮಾತಿನ ಚಾಟಿ ಬೀಸಿದರು. ಕಾಂಗ್ರೆಸ್ಸಿನವರು ಈಗಾಗಲೇ ಅಸ್ತಿತ್ವ ಕಳೆದುಕೊಂಡಿದ್ದು, ಕೈ ಪಕ್ಷದವರು ಅವರನ್ನೇ ಅವರು ಹುಡುಕಿಕೊಳ್ಳುವ ಸ್ಥಿತಿ ಬರುತ್ತೆ ಎಂದು ಟಾಂಗ್ ಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *