ಬದ್ರಿ ವರ್ಸಸ್ ಮಧುಮತಿ: ಇದರಲ್ಲಿದೆ ಮೈನವಿರೇಳಿಸೋ ಸರ್ಜಿಕಲ್ ಸ್ಟ್ರೈಕ್!

Public TV
1 Min Read

ಪಾಕಿಸ್ತಾನ ಪ್ರಣೀತ ಪಾಪಿ ಉಗ್ರರು ಪುಲ್ವಾಮಾ ದಾಳಿಯಲ್ಲಿ ನಮ್ಮ ಸೈನಿಕರನ್ನು ಬಲಿ ಪಡೆದ ನಂತರ ದೇಶದ ಜನರ ರಕ್ತ ಕುದಿಯಲಾರಂಭಿಸಿದೆ. ಭಾರತೀಯ ಸೈನಿಕರು ಪಾಕಿಸ್ತಾನದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರ ನೆಲೆಗಳನ್ನು ನಿರ್ನಾಮ ಮಾಡಿದ್ದಾರೆ. ಈ ಕುರಿತಾಗಿ ಸಿನಿಮಾಗಳನ್ನು ಮಾಡಲೂ ಪೈಪೋಟಿ ನಡೆದಿದೆ.

ಆದರೆ ಈ ದಾಳಿಗೂ ತಿಂಗಳುಗಳ ಮುಂಚೆಯೇ ಈ ಚಿತ್ರಕ್ಕಾಗಿ ಸರ್ಜಿಕಲ್ ಸ್ಟ್ರೈಕ್ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿತ್ತು. ಇದುವೇ ಈ ಚಿತ್ರದ ಪ್ರಮುಖ ಆಕರ್ಷಣೆ. ಈ ಸರ್ಜಿಕಲ್ ಸ್ಟ್ರೈಕ್ ದೃಶ್ಯಾವಳಿಗಳು ಈಗಿನ ಸನ್ನಿವೇಶಕ್ಕೆ ಕನೆಕ್ಟ್ ಆಗುವಂತಿವೆಯಂತೆ. ನೋಡಿದ ಪ್ರತಿಯೊಬ್ಬರೂ ರೋಮಾಂಚನಗೊಳ್ಳುವ ರೀತಿಯಲ್ಲಿದು ಮೂಡಿ ಬಂದಿದೆಯಂತೆ.

ಸರ್ಜಿಕಲ್ ಸ್ಟ್ರೈಕ್ ದೃಶ್ಯಾವಳಿಗಳು ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬರಲು ಕಾರಣರಾಗಿರುವವರು ಸಾಹಸ ನಿರ್ದೇಶಕ ವಿಕ್ರಂ. ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಕೆಜಿಎಫ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದವರು ಇದೇ ವಿಕ್ರಂ. ಅವರು ಭಿನ್ನವಾಗಿ, ಹೊಸತನದೊಂದಿಗೆ ಸರ್ಜಿಕಲ್ ಸ್ಟ್ರೈಕ್ ಮತ್ತು ಇನ್ನೊಂದು ಸಾಹಸ ದೃಶ್ಯಾವಳಿಯನ್ನು ನಿರ್ದೇಶನ ಮಾಡಿದ್ದಾರಂತೆ.

ಹಾಗಾದರೆ ಇಡೀ ಚಿತ್ರದುದ್ದಕ್ಕೂ ಸೈನ್ಯದ, ಯುದ್ಧದ ಸನ್ನಿವೇಶಗಳಿವೆಯಾ ಎಂಬುದನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಆದರೆ ಈ ಚಿತ್ರದಲ್ಲಿ ಪ್ರೀತಿ, ಫ್ಯಾಮಿಲಿ, ಸೆಂಟಿಮೆಂಟ್, ಹಾಸ್ಯ, ಸಾಹಸ ಸೇರಿದಂತೆ ಎಲ್ಲ ರಸಗಳ ರಸಾಯನವೂ ಸವಿಯಲು ಸಿಗುತ್ತೆ. ಅದು ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಳ್ಳಲಿದೆ ಅನ್ನೋದು ಚಿತ್ರತಂಡದ ಭರವಸೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *