ಚಿತ್ರಕಥಾ: ಕಥೆಯ ವೇಗಕ್ಕೆ ಕೊರವಂಜಿಯ ಕನೆಕ್ಷನ್ನು!

Public TV
1 Min Read

ಬೆಂಗಳೂರು: ಯಶಸ್ವಿ ಬಾಲಾದಿತ್ಯ ನಿರ್ದೇಶನದ ಚಿತ್ರಕಥಾ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಈ ಕಡೇಯ ಕ್ಷಣಗಳಲ್ಲಿ ಈ ಸಿನಿಮಾ ಕುರಿತಾದ ಒಂದೊಂದೇ ಕುತೂಹಲಕರ ಅಂಶಗಳನ್ನು ಚಿತ್ರತಂಡ ಜಾಹೀರು ಮಾಡುತ್ತಿದೆ. ಅದರಲ್ಲಿ ತಾರಾಗಣದ ಗುಟ್ಟುಗಳೂ ಸೇರಿಕೊಂಡಿವೆ. ಸುಧಾರಾಣಿ, ತಬಲಾ ನಾಣಿ, ದಿಲೀಪ್ ರಾಜ್, ಅನುಷಾ ರಾವ್ ಸೇರಿದಂತೆ ಅನೇಕರ ತಾರಾಗಣ ಈ ಚಿತ್ರದಲ್ಲಿದೆ. ಹಿರಿಯ ರಂಗಭೂಮಿ ನಟಿ ನಿರ್ವಹಿಸಿರೋ ಕೊರವಂಜಿ ಪಾತ್ರವಂತೂ ಬಹಳಷ್ಟು ವಿಶೇಷತೆಗಳನ್ನು ಬಚ್ಚಿಟ್ಟುಕೊಂಡಿದೆಯಂತೆ.

ಸುಜಿತ್ ರಾಥೋಡ್ ಮುಖ್ಯ ಪಾತ್ರದಲ್ಲಿ ನಟಿಸಿರೋ ಈ ಚಿತ್ರವನ್ನು ಪ್ರಜ್ವಲ್ ಎಂ ರಾಜಾ ನಿರ್ಮಾಣ ಮಾಡಿದ್ದಾರೆ. ಇದು ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರ. ಆದರೆ ಇದುವರೆಗೂ ಬಂದಿರೋ ಈ ಜಾನರಿನ ಚಿತ್ರಗಳ ಸಾಲಿನಲ್ಲಿಯೇ ಇದನ್ನೂ ದಾಖಲಿಸುವಂತೆಲ್ಲ. ಯಾಕೆಂದರೆ ಇದು ಕಮರ್ಶಿಯಲ್ ಅಂಶಗಳೊಂದಿಗೆ ಪ್ರಯೋಗಾತ್ಮಕ ಪಟ್ಟುಗಳನ್ನು ಹೊಂದಿರೋ ಚಿತ್ರ.

ಕಲಾವಿದನೊಬ್ಬ ಬಿಡಿದಿಸಿ ಅಪರಿಚಿತನ ಚಿತ್ರವೇ ಅಘೋರಿಯ ರೂಪದಲ್ಲಿ ಕಾಡೋ ಈ ಸಿನಿಮಾ ಕಥೆ ನಾನಾ ದಿಕ್ಕುಗಳಲ್ಲಿ ಚಲಿಸುತ್ತೆ. ಅಂಥಾ ಸಿಕ್ಕುಗಳನ್ನು ಬಿಡಿಸು ಪಾತ್ರಗಳಿಗೆ ಮತ್ತಷ್ಟು ಓಘ ನೀಓಡೋ ಪಾತ್ರವನ್ನು ಸುಧಾರಾಣಿ ನಿರ್ವಹಿಸಿದರೆ, ಇಡೀ ಚಿತ್ರಪಕ್ಕೆ ಬೇರೆ ದಿಕ್ಕು ತೋರಿಸುವ ಕೊರವಂಜಿಯ ಪಾತ್ರದಲ್ಲಿ ಬಿ ಜಯಶ್ರೀಯವರು ನಟಿಸಿದ್ದಾರೆ. ಇದು ಹೆಚ್ಚು ಅವಧಿಯಲ್ಲೇನೂ ತೆರೆ ಮೇಲಿರೋದಿಲ್ಲ. ಆದರೆ ಅದು ಅಷ್ಟು ಸಲೀಸಾಗಿ ಪ್ರೇಕ್ಷಕರ ಮನದಿಂದ ಮರೆಯಾಗುವುದೂ ಇಲ್ಲ. ನಿಜಕ್ಕೂ ಈ ಪಾತ್ರದಲ್ಲಿ ಅಂಥಾ ವಿಶೇಷಗಳೇನಿವೆ ಎಂಬುದು ಹ್ನ್ನೆರಡನೇ ತಾರೀಕು ಅಂದರೆ ಈ ವಾರ ಗೊತ್ತಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *