ನಟ ಯಶ್ ಕೃಷ್ಣಮಠಕ್ಕೆ ಭೇಟಿ – ಕನಕ ನವಗ್ರಹ ಕಿಂಡಿಯ ಮೂಲಕ ದೇವರ ದರ್ಶನ

Public TV
1 Min Read

ಉಡುಪಿ: ಬಹುನಿರೀಕ್ಷಿತ ಕೆಜಿಎಫ್2 ಚಿತ್ರ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ಕೆಜಿಎಫ್-1 ಹುಟ್ಟಿಸಿದ್ದ ನಿರೀಕ್ಷೆಗಿಂತ ಹೆಚ್ಚು ಕುತೂಹಲ ಕೆಜಿಎಫ್-2 ಮೇಲೆ ಇದೆ.

ಏಪ್ರಿಲ್ 14ಕ್ಕೆ ಚಿತ್ರ ರಿಲೀಸ್ ಮಾಡುವುದಾಗಿ ತಂಡ ಹೇಳಿದೆ. ಈ ನಡುವೆ ರಾಕಿಂಗ್ ಸ್ಟಾರ್ ಯಶ್ ಉಡುಪಿ ಜಿಲ್ಲೆ ಕುಂದಾಪುರದಲ್ಲಿ ಬೀಡುಬಿಟ್ಟಿದ್ದಾರೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಬ್ಯಾಗ್ರೌಂಡ್ ಸ್ಕೋರ್ ನ ಫೈನಲ್ ಟಚ್ ನಡೆಯುತ್ತಿದ್ದು ವಿರಾಮದ ವೇಳೆ ಯಶ್ ದೇಗುಲ ದರ್ಶನ ಮಾಡುತ್ತಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮತ್ತು ಕುಂಭಾಶಿ ವಿನಾಯಕ ದೇವಸ್ಥಾನಕ್ಕೆ ವಾರದ ಹಿಂದೆ ಭೇಟಿಕೊಟ್ಟಿದ್ದರು. ಇದನ್ನೂ ಓದಿ: ಕೆಜಿಎಫ್ ಟೀಮ್​ ಜೊತೆ ಕ್ರಿಕೆಟ್ ಆಡಿದ ಯಶ್: ವೀಡಿಯೋ ವೈರಲ್

ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿಕೊಟ್ಟು ಕನಕ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿದ್ದಾರೆ. ನಿರ್ಮಾಪಕ ವಿಜಯ್ ಕಿರಂಗದೂರು ಜೊತೆ ಆಗಮಿಸಿದ ಕೃಷ್ಣ ಮಠಕ್ಕೆ ತೆರಳಿ ದರ್ಶನ ಮಾಡಿದರು. ದೇವರ ದರ್ಶನ ಮಾಡಿ ರಥಬೀದಿಯಲ್ಲಿ ವಾಪಸಾಗುತ್ತಿದ್ದಂತೆ ಅಭಿಮಾನಿಗಳು ಫೋಟೋಗಳನ್ನು ತೆಗೆದು ವಿಶ್ ಮಾಡಿದ್ರು. ಅಭಿಮಾನಿಗಳ ಸೆಲ್ಫಿಗೆ ಯಾಸ್ ಅವಕಾಶ ಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *