ದಯವಿಟ್ಟು ಹಾಳಾಗುವಂತಹ ಪದಾರ್ಥಗಳನ್ನು ಸಂತ್ರಸ್ತರಿಗೆ ಕಳುಹಿಸಬೇಡಿ- ವಿಜಯ ರಾಘವೇಂದ್ರ ಮನವಿ

Public TV
1 Min Read

ಬೆಂಗಳೂರು: ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಸಹಾಯಕ್ಕಾಗಿ ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಹಲವಾರು ಮಂದಿ ಮುಂದೆ ಬಂದಿದ್ದಾರೆ. ಈ ಮಧ್ಯೆ ನಟ ವಿಜಯ ರಾಘವೇಂದ್ರ ಅವರು ಸಹಾಯ ಹಸ್ತ ಚಾಚುವವರಲ್ಲಿ ಮನವಿ ಮಾಡಿಕೊಂಡಿದ್ದು, ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.

ಫೇಸ್ ಬುಕ್ ಲೈವ್ ಬಂದ ನಟ, ಧೈರ್ಯಗೆಡಬೇಡಿ, ಹೆಗಲಾಗಿ, ತೋಳಾಗಿ ನಾವು ನಿಮ್ಮ ಜೊತೆ ನಿಂತಿರುತ್ತೇವೆ ಎಂದು ನೆರೆ ಸಂತ್ರಸ್ತರ ಬಳಿ ಮನವಿ ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲೇನಿದೆ..?
ಕರ್ನಾಟಕದ ಉತ್ತರ ಭಾಗದಲ್ಲಿ ಪ್ರಕೃತಿ ವಿಕೋಪದಿಂದಾಗಿ ಎಷ್ಟೋ ಜೀವಗಳು ಸಂಕಷ್ಟಕ್ಕೆ ಕಾರಣವಾಗಿರುವ ಈ ಮಳೆ, ಪ್ರವಾಹವನ್ನು ನೋಡುತ್ತಿದ್ದರೆ ಒಂದೆಡೆ ಭಯ ಉಂಟಾಗುತ್ತದೆ. ಇನ್ನೊಂದೆಡೆ ಜವಾಬ್ದಾರಿ ಮತ್ತೆ ತಲೆ ಎತ್ತಿ ನಿಲ್ಲುವಂತೆ ಮಾಡಿದೆ.

ಸಿನಿಮಾರಂಗದಲ್ಲಿ ತಮ್ಮ ಅಭಿಮಾನಿಗಳು ದೇವರುಗಳಿಗೆ ಕಷ್ಟ ಬಂದಾಗ ಯಾರೂ ಕೂಡ ಸುಮ್ಮನಿರುವುದಿಲ್ಲ. ಹಾಗಾಗಿ ಮಿತಿ ಮೀರಿದ ಸಹಾಯಹಸ್ತವನ್ನು ಎಲ್ಲರೂ ಚಾಚುತ್ತಿದ್ದಾರೆ. ಆದರೆ ಮುಖ್ಯವಾದ ವಿಚಾರವೆಂದರೆ, ಅಲ್ಲಿಗೆ ಬ್ಲಾಂಕೆಟ್ ಗಳು, ಅಡುಗೆ ಮಾಡುವುದಕ್ಕೆ ಬೇಕಾದಂತಹ ಸಾಮಾಗ್ರಿಗಳು ಜೊತೆಗೆ ಸ್ಯಾನಿಟರಿ ನ್ಯಾಪ್ ಕಿನ್, ಫಿನಾಯಿಲ್ ಹೀಗೆ ಅಲ್ಲಿ ಉಪಯೋಗಕ್ಕೆ ಬರುವಂತಹ ವಸ್ತುಗಳನ್ನು ಕಳುಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಹಾಳಾಗುವಂತಹ ತಿಂಡಿ ಪದಾರ್ಥಗಳನ್ನು ಕಳುಹಿಸುವುದು ಬೇಡ, ಬದಲಾಗಿ ಬಿಸ್ಕೆಟ್, ಮ್ಯಾಗಿಯನ್ನು ಕಳುಹಿಸಬಹುದು. ಇವುಗಳು ತುರ್ತು ಪರಿಸ್ಥಿತಿಗೆ ಸಹಾಯವಾಗುತ್ತದೆ ಎಂದರು. ಇದನ್ನೂ ಓದಿ: ಉತ್ತರ ಕರ್ನಾಟಕ ಸಂತ್ರಸ್ತರ ನೆರವಿಗೆ ನಿಂತ ಯಶೋಮಾರ್ಗ

ಕೆಎಸ್‍ಆರ್‍ಟಿಸಿ ಅವರು ಇಲ್ಲಿಂದ ವಸ್ತುಗಳನ್ನು ಉಚಿತವಾಗಿ ಅಲ್ಲಿಗೆ ತಲುಪಿಸುತ್ತಿದ್ದಾರೆ. ನೀವುಗಳು ವಸ್ತುಗಳನ್ನು ಅವರ ಬಳಿ ಕೊಟ್ಟರೆ ಸಾಕು, ಅವರು ಎಲ್ಲೆಲ್ಲಿ ಅವುಗಳ ಅಗತ್ಯತೆ ಇದೆಯೋ ಅಲ್ಲಿಗೆ ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿ ನಮ್ಮ ಕೆಲಸ ನಿಲ್ಲಿಸೋದು ಬೇಡ ಎಂದು ವಿಜಯ ರಾಘವೇಂದ್ರ ಸಹಾಯ ಮಾಡುವವರ ಬಳಿ ಕೇಳಿಕೊಂಡರು.

ನೀವು ಯಾರೂ ಹೆದರಿಕೊಳ್ಳಬೇಡಿ. ಯಾವುದೇ ಸಂದರ್ಭದಲ್ಲೂ ನಿಮ್ಮ ಜೊತೆ ನಾವಿರುತ್ತೇವೆ. ಹೆಗಲಾಗಿ, ತೋಳಾಗಿ ನಿಂತಿರುತ್ತೇವೆ. ಧೈರ್ಯವಾಗಿರಿ ಎಂದು ನೆರೆ ಸಂತ್ರಸ್ತರಲ್ಲಿ ನಟ ಮನವಿ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *