ಗದಗ: ಸ್ಯಾಂಡಲ್ವುಡ್ ನಟ ರವಿಶಂಕರ್ ಗದಗ ನಗರಕ್ಕೆ ಭೇಟಿ ನೀಡಿದ್ದು, ನೆಚ್ಚಿನ ನಟನಿಗೆ ಕೈಕುಲುಕಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಗದಗ ನಗರದ ಬೆಟಗೇರಿ ಬಸ್ ನಿಲ್ದಾಣದ ಬಳಿ ಅಭಿಮಾನಿಗಳು ಜಮಾಯಿಸಿದ್ದಾರೆ. ಕನ್ನಡ ಚಿತ್ರದ ಡೈಲಾಗ್ ಹೇಳುವ ಮೂಲಕ ನಟ ರವಿಶಂಕರ್ ಅಭಿಮಾನಿಗಳನ್ನು ರಂಜಿಸಿದ್ದಾರೆ. ನಟ ರವಿಶಂಕರ್ ಗದಗ ಜಿಲ್ಲೆ ಗಜೇಂದ್ರಗಡಕ್ಕೆ ಫಿಲ್ಮ್ ಶೂಟಿಂಗ್ ಹೊರಟಿದ್ದರು.
ರವಿಶಂಕರ್ ಫಿಲ್ಮ್ ಶೂಟಿಂಗ್ಗೆ ಎಂದು ಗಜೇಂದ್ರಗಡಕ್ಕೆ ಹೊರಟ್ಟಿದ್ದ ವೇಳೆ ಅವರ ಕಾರಿಗೆ ಸಾವಿರಾರು ಅಭಿಮಾನಿಗಳು ಮುಗಿಬಿದ್ದಿದ್ದರು. ಅಭಿಮಾನಿಗಳ ಒತ್ತಾಯಕ್ಕೆ ರವಿಶಂಕರ್ ಕೆಲ ಹೊತ್ತು ಅಭಿಮಾನಿಗಳ ಜೊತೆ ಕಾಲ ಕಳೆದು ಸೆಲ್ಫಿ ತೆಗೆದುಕೊಂಡಿದ್ದಾರೆ.
ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಮೈಸೂರು ಪೇಠ ತೊಡಿಸಿ ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಕಿಚ್ಚ ಸುದೀಪ್ ನಟಿಸಿ, ನಿರ್ದೇಶಿಸಿದ್ದ ‘ಕೆಂಪೇಗೌಡ’ ಚಿತ್ರದ ಮೂಲಕ ರವಿಶಂಕರ್ ಖಳನಟನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಿದ್ದರು. ರವಿಶಂಕರ್ ಸ್ಯಾಂಡಲ್ವುಡ್ನಲ್ಲಿ ಖಳನಟ ಮಾತ್ರವಲ್ಲದೇ ಹಾಸ್ಯನಟ, ಪೋಷಕ ನಟರಾಗಿಯೂ ಮಿಂಚುತ್ತಿದ್ದಾರೆ.
https://www.youtube.com/watch?v=lmUE0srGZyI&feature=youtu.be
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv