ತಂದೆತಾಯಿ ಇರುವ ಅದೃಷ್ಟವಂತರೆ ಎಷ್ಟು ಸಾಧ್ಯವೋ ಅಷ್ಟು ಅವರ ಆಸೆ ಈಡೇರಿಸಿ, ಪ್ರೀತಿಸಿ: ಜಗ್ಗೇಶ್

Public TV
1 Min Read

ಬೆಂಗಳೂರು: ತಂದೆತಾಯಿ ಇರುವ ಅದೃಷ್ಟವಂತರೆ ಎಷ್ಟು ಸಾಧ್ಯವೋ ಅಷ್ಟು ಅವರ ಆಸೆ ಪೂರೈಸಿ ಪ್ರೀತಿಸಿ ಭಾವನಾತ್ಮಕವಾಗಿ ಬಾಳಿ. ಹೋದ ಮೇಲೆ ನೆನಪು ಮಾತ್ರ. ಎಷ್ಟೇ ಪರಿತಪಿಸಿದರು ನಮ್ಮಕೈಗೆ ಹೋದಮೇಲೆ ಆ ದೇವರುಗಳು ಸಿಗರು ಎಂದು ನಟ ಜಗ್ಗೇಶ್ ಅವರು ಫೇಸ್‍ಬುಕ್ ನಲ್ಲಿ ಪೋಸ್ಟ್ ಪ್ರಕಟಿಸಿದ್ದು ವೈರಲ್ ಆಗಿದೆ.

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಜಗ್ಗೇಶ್ ತಂದೆಯ ಕುರಿತು ಪೋಸ್ಟ್ ಪ್ರಕಟಿಸಿದ್ದು, ಇದೂವರೆಗೂ ಈ ಪೋಸ್ಟನ್ನು 600ಕ್ಕೂ ಹೆಚ್ಚು ಮುಂದೆ ಶೇರ್ ಮಾಡಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ವರಮಹಾಲಕ್ಷ್ಮಿ ಹಬ್ಬ ಬಂದರೆ ಅಪ್ಪ ಎಲ್ಲೆ ಇದ್ದರೂ ಹುಡುಕಿಬಂದು ಕೈಗೆ ಸಿಕ್ಕಷ್ಟು ಹಣಕೊಟ್ಟು ಹರಸಿ ಹೋಗುತ್ತಿದ್ದರು ಪಾಪ. ಅವರಿಗೆ ಮಕ್ಕಳು ಅಂದರೆ ಪ್ರಾಣ. ಅದರಲ್ಲೂ ಕೋಮಲ್ ಅಂದರೆ ತಡೆಯಲಾಗದ ಪ್ರೀತಿ. ಈ ಹಬ್ಬಕ್ಕೆ ಯಾಕೋ ಅವರ ನೆನಪು ತುಂಬ ಕಾಡಿತು. ಬೆಳಿಗ್ಗೆ ಕೋಮಲ್ ಗೆ ಕರೆ ಮಾಡಿ ಅಪ್ಪನ ಸಮಾಧಿಗೆ ನಮಸ್ಕರಿಸಿ ಬರೋಣವೆ ಎಂದೆ ಮರುಮಾತಾಡದೆ ಅವನ ಸಿನಿಮ ಕಾರ್ಯ ಬದಿಗೊತ್ತಿ ಬಂದೆಬಿಟ್ಟ. ಜೊತೆ ನನ್ನ 2ನೆ ಅಕ್ಕನು ಸೇರಿಕೊಂಡಳು.

ಭಾರದ ಹೃದಯದಿಂದ ಅಪ್ಪನ ಸಮಾಧಿಗೆ ಪೂಜಿಸಿದೆವು. ತಂದೆತಾಯಿ ಕಳೆದುಕೊಂಡವರಿಗೆ ಮಾತ್ರ ಗೊತ್ತು ಅವರ ಮಹತ್ವ. ಇದ್ದಾಗ ಅದರ ಮಹತ್ವದ ಅರಿವಾಗುವುದಿಲ್ಲ. ತಂದೆತಾಯಿ ಇರುವ ಅದೃಷ್ಟವಂತರೆ, ಎಷ್ಟುಸಾಧ್ಯವೋ ಅಷ್ಟು ಅವರ ಆಸೆ ಪೂರೈಸಿ ಪ್ರೀತಿಸಿ ಭಾವನಾತ್ಮಕವಾಗಿ ಬಾಳಿ. ಹೋದ ಮೇಲೆ ನೆನಪು ಮಾತ್ರ. ಎಷ್ಟೇ ಪರಿತಪಿಸಿದರು ನಮ್ಮಕೈಗೆ ಹೋದಮೇಲೆ ಆ ದೇವರುಗಳು ಸಿಗರು. ಎಷ್ಟೇ ದೇವರಿದ್ದರೂ ತಂದೆತಾಯಿಯೇ ಶ್ರೇಷ್ಠ. ಶುಭರಾತ್ರಿ.

Share This Article
Leave a Comment

Leave a Reply

Your email address will not be published. Required fields are marked *