ರಸ್ತೆ ಅಗೆದ್ರೆ ಎಂಜಿನಿಯರ್‌ಗಳ ಸಂಬಳ ಕಟ್- ಚುನಾವಣೆ ಹೊತ್ತಲ್ಲೇ BBMP ಖಡಕ್ ಆದೇಶ

Public TV
2 Min Read

ಬೆಂಗಳೂರು: ಚುನಾವಣೆ (Karnataka Election 2023) ಸಮೀಪಿಸ್ತಾ ಇದ್ದಂತೆ ಬಿಬಿಎಂಪಿ ಅಲರ್ಟ್ ಆಗಿದೆ. ರಸ್ತೆಗಳು ಚೆನ್ನಾಗಿ ಇರಬೇಕು ಅಂತಾ ಎಂಜಿನಿಯರ್ ಗಳಿಗೆ ಒಂದು ಖಡಕ್ ಆದೇಶ ಮಾಡಿದೆ. ಈ ಆದೇಶ ಪಾಲಿಸದಿದ್ದರೆ ಎಂಜಿನಿಯರ್ ಗಳ ಸಂಬಳ ಕಟ್ ಮಾಡೋದಾಗಿ ಪಾಲಿಕೆ ಸೂಚಿಸಿದೆ.

ಹೌದು. ಬೆಂಗಳೂರಿನಂತಹ ಮಹಾನಗರದಲ್ಲಿ ಬಿಬಿಎಂಪಿ (BBMP) ಎಡವಟ್ಟು ಮತ್ತು ಕಳಪೆ ಕಾಮಗಾರಿಗಳಿಂದ ಜನ ನರಕ ಅನುಭವಿಸ್ತಾ ಇದ್ದಾರೆ. ಅದರಲ್ಲಿ ರಸ್ತೆ ಗುಂಡಿ ಮತ್ತು ರಸ್ತೆ ಅಗೆತ ದೊಡ್ಡ ಸಮಸ್ಯೆ ಆಗಿ ಪರಿಣಮಿಸ್ತಾ ಇದೆ. ಇದರ ವಿರುದ್ಧ ಸರ್ಕಾರಕ್ಕೆ ಜನ ಛೀಮಾರಿ ಹಾಕ್ತಾ ಇದ್ದು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕ್ತಾ ಇದ್ದಾರೆ. ಹೀಗಾಗಿ ಚುನಾವಣೆ ಹೊತ್ತಲ್ಲಿ ರಸ್ತೆಗಳು ಚೆನ್ನಾಗಿ ಇರಬೇಕು ಅಂತಾ ಬಿಬಿಎಂಪಿ ಒಂದು ಆದೇಶ ಮಾಡಿದೆ. ಪಾಲಿಕೆ ರಸ್ತೆ ಅಗೆತ ತಡೆಯಲು ಹೊಸ ಅಸ್ತ್ರವನ್ನ ಪ್ರಯೋಗ ಮಾಡಲು ಮುಂದಾಗಿದೆ. ಇದನ್ನೂ ಓದಿ: ಕೈಯಲ್ಲಿ ವಯೋವೃದ್ಧ ಫೋಟೋ ಹಿಡಿದು ರಸ್ತೆ ದಾಟುತ್ತಿದ್ದಾಗ ವ್ಯಕ್ತಿಗೆ ಕಾರು ಡಿಕ್ಕಿ- ಸಾವು

ಹೌದು. ಬೆಂಗಳೂರಿನಲ್ಲಿ ಇನ್ಮುಂದೆ ರಸ್ತೆ ನಿರ್ಮಾಣ, ಡಾಂಬರೀಕರಣ, ರಸ್ತೆ ಪುನಶ್ಚೇತನ, ಕೇಬಲ್ ಅಳವಡಿಕೆ ಮಾಡುವ ಆಗಿದ್ದರೆ ಮೊದಲೇ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆಗಳಲ್ಲಿ ಅಗೆತ ಕಂಡು ಬಂದರೆ ಎಂಜಿನಿಯರ್‌ಗಳ ಸಂಬಳವನ್ನ ಕಟ್ ಮಾಡುವುದಾಗಿ ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತರು ಖಡಕ್ ಆದೇಶ ಮಾಡಿದ್ದಾರೆ. ತೆಗೆದಿರುವ ಗುಂಡಿ ಮುಚ್ಚಲು ಬಿಬಿಎಂಪಿಯಿಂದ ಯಾವುದೇ ಅನುದಾನ ನೀಡಲ್ಲ, ಬದಲಾಗಿ ಎಂಜಿನಿಯರ್ ಗಳು, ಕಿರಿಯ ಅಭಿಯಂತರರು ತಮ್ಮ ಸ್ವಂತ ಖರ್ಚುಗಳಿಂದನೇ ಕೆಲಸ ಮಾಡಿಸಬೇಕಾಗುತ್ತೆ. ಜೊತೆಗೆ ಎಂಜಿನಿಯರ್‍ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳೊದಾಗಿ ಆದೇಶ ಮಾಡಿದ್ದಾರೆ.

ಒಟ್ಟಾರೆ ಚುನಾವಣೆ ಹೊತ್ತಲ್ಲೆ ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳು ಚೆನ್ನಾಗಿ ಇರಬೇಕು ಅಂತಾ ಇಂತಹ ಖಡಕ್ ಆದೇಶ ಬಂದಿದೆ. ಈ ಆದೇಶ ಪಾಲನೆ ಆಗುತ್ತಾ. ರಸ್ತೆಗಳು ಅಗೆತ ಆಗದೇ ಇಂಜಿನಿಯರ್ ಗಳು ಅವುಗಳನ್ನ ನಿಯಂತ್ರಣ ಮಾಡೋದಕ್ಕೆ ಮುಂದಾಗ್ತಾರ ಕಾದು ನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *