ಸಚಿನ್ ಆತ್ಮಹತ್ಯೆ ಕೇಸ್ – ಡಿಐಜಿಪಿ ಶಾಂತನು ಸಿನ್ಹಾ ಭೇಟಿ, ಸ್ಥಳ ಮಹಜರು

Public TV
1 Min Read

ಬೀದರ್: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ (Sachin Panchal Sucide Case) ಸಂಬಂಧಿಸಿದಂತೆ ಇಂದು ಸಿಐಡಿ ಡಿಐಜಿಪಿ ಶಾಂತನು ಸಿನ್ಹಾ ಭೇಟಿ ನೀಡಿದ್ದಾರೆ.

ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಶೀಘ್ರವಾಗಿ ತನಿಖೆ ಮಾಡಿ, ವರದಿ ನೀಡಲು ಆದೇಶಿಸಿದೆ. ಈ ಹಿನ್ನೆಲೆ ಇಂದು ಜಿಲ್ಲೆಗೆ ಆಗಮಿಸಿರುವ ಸಿಐಡಿ ಡಿಐಜಿಪಿ ಶಾಂತನು ಸಿನ್ಹಾ ಆತ್ಮಹತ್ಯೆ ಸ್ಥಳ ಮಹಜರು ಮಾಡಿದ್ದಾರೆ.ಇದನ್ನೂ ಓದಿ:Ramanagara| ಬಾಯ್ಲರ್ ಪೈಪ್ ಸ್ಫೋಟ – ಚಿಕಿತ್ಸೆ ಫಲಿಸದೇ ಓರ್ವ ಕಾರ್ಮಿಕ ಸಾವು

ಬಸವೇಶ್ವರ ವೃತ್ತದ ಬಳಿಯ ರೈಲು ಹಳಿ ಮೇಲೆ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಸ್ಥಳಕ್ಕೆ ಭೇಟಿ ನೀಡಿ, ಆತ್ಮಹತ್ಯೆ ದಿನದ ಇಂಚಿಂಚು ಮಾಹಿತಿ ಪಡೆದಿದ್ದಾರೆ. ರೈಲ್ವೆ ಪೊಲೀಸರು ಹಾಗೂ ಸಿಐಡಿ ತಂಡದಿಂದ ಪ್ರತಿಯೊಂದು ಮಾಹಿತಿ ಪಡೆದಿದ್ದಾರೆ.

ಇನ್ನೂ ಭಾಲ್ಕಿಯ ಕಟ್ಟಿತೂಗಾಂವ ಗ್ರಾಮದ ಸಚಿನ್ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರ ವಿಚಾರಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ದೇವಿ ಗೆಟಪ್‌ನಲ್ಲಿ ಕಾಜಲ್- ‘ಕಣ್ಣಪ್ಪ’ ಚಿತ್ರದ ಫಸ್ಟ್ ಲುಕ್ ಔಟ್

 

Share This Article