`ವೃಕ್ಷಮಾತೆ’ (Vruksha maate) ಹೆಸರಿನಲ್ಲಿ ತಮ್ಮದೇ ಜೀವನಾಧಾರಿತ ಕಥೆಗೆ ಅನುಮತಿ ಕೊಟ್ಟಿದ್ದ ಸಾಲುಮರದ ತಿಮ್ಮಕ್ಕ (Salumarada Thimmakka) ಇದೀಗ ಚಿತ್ರೀಕರಣಕ್ಕೆ ತಡೆ ಕೋರಿ ದೂರು ಕೊಟ್ಟಿದ್ದಾರೆ. ಕುದೂರಿನ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದ ತಿಮ್ಮಕ್ಕನ ಸಾಕು ಮಗ ಉಮೇಶ್ ಇದೀಗ ತಿಮ್ಮಕ್ಕನ ಜೊತೆಗೂಡಿ ಕರ್ನಾಟಕ ಫಿಲ್ಮ್ ಚೇಂಬರ್ (Karnataka Film Chamber) ಮೆಟ್ಟಿಲೇರಿದ್ದಾರೆ. ಚಿತ್ರೀಕರಣವನ್ನು ನಿಲ್ಲಿಸುವಂತೆ ಕೋರಿ ಚಿತ್ರತಂಡಕ್ಕೆ ವಾಣಿಜ್ಯ ಮಂಡಳಿ ನಿರ್ದೇಶನ ಕೊಡುವಂತೆ ದೂರುಪತ್ರ ಕೊಟ್ಟಿದ್ದಾರೆ.
ಪರಿಸರ ಪೋಷಣೆಗೆ ಜೀವನ ಮುಡಿಪಾಗಿಟ್ಟಿರುವ ತಿಮ್ಮಕ್ಕನ ನಿಜಜೀವನ ಆಧಾರಿತ `ವೃಕ್ಷಮಾತೆ’ ಸಿನಿಮಾ ತಂಡಕ್ಕೆ ಆರಂಭದಲ್ಲೇ ಅಡ್ಡಿ ಎದುರಾಗಿದೆ. ಸ್ವತಃ ತಿಮ್ಮಕ್ಕ ಅವರೇ ವಿರೋಧ ವ್ಯಕ್ತಪಡಿಸಿದ್ದು, ಚಿತ್ರೀಕರಣ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: 3 ದಿನದೊಳಗೆ ಉತ್ತರಿಸಿ – ಕಾಂತಾರ ತಂಡಕ್ಕೆ ನೋಟಿಸ್
ಈಗಾಗಲೇ ವೃಕ್ಷಮಾತೆ ಚಿತ್ರ ಸೆಟ್ಟೇರಿ 2 ದಿನ ಚಿತ್ರೀಕರಣವನ್ನೂ ಮಾಡಿದ್ದಾರೆ ಎನ್ನಲಾಗುತ್ತಿದೆ. ಶ್ರೀ ಲಕ್ಷ್ಮೀವೆಂಕಟೇಶ್ವರ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ತಯಾರಾಗುತ್ತಿದ್ದು, ಒರಟ ಖ್ಯಾತಿಯ ಶ್ರೀ ನಿರ್ದೇಶನ ಮಾಡುತ್ತಿದ್ದರು. ಸಿದ್ದೇಶ್ ಅವರು ಬರೆದಿರುವ ಸಾಲುಮರದ ತಿಮ್ಮಕ್ಕ ಕೃತಿ ಆಧರಿಸಿ ಚಿತ್ರ ತಯಾರಾಗುತ್ತಿತ್ತು. ಇದೀಗ ಸ್ವತಃ ತಿಮ್ಮಕ್ಕ ಅವರೇ ತಮ್ಮ ಜೀವನಾಧಾರಿತ ಕಥೆಯ ಚಿತ್ರ ಮಾಡದಂತೆ ತಡೆದಿದ್ದಾರೆ. ಇದನ್ನೂ ಓದಿ: ಚಾಮುಂಡಿ ತಾಯಿ ಕಾಪಾಡಮ್ಮ – `ದಿ ರಾಜಾ ಸಾಬ್’ ಚಿತ್ರದಲ್ಲಿ ಪ್ರಭಾಸ್ ಘರ್ಜನೆ
ತಿಮ್ಮಕ್ಕನ ಆರೋಪವೇನು?
ನಿರ್ಮಾಪಕ ದಿಲೀಪ್ ಅವರು ಬಂದು ಸಿನಿಮಾ ಮಾಡ್ತೀವಿ ಅಂದ್ರು ಬೇಡ ಎಂದೇ ಹೇಳಿದ್ವಿ. ಕೃತಿಯಾಧಾರಿತ ಚಿತ್ರ ಅಂತ ಹೇಳ್ತಾರೆ. ಕೃತಿಯೇ ಸರಿ ಇಲ್ಲ. ಅದಲ್ಲದೇ ಚಿತ್ರೀಕರಣಕ್ಕಾಗಿ ಮರಗಳನ್ನೇ ಕಡಿದಿದ್ದಾರೆ. ಈವರೆಗೆ ಎಷ್ಟೇ ಬೇಡಿಕೆ ಬಂದಿದ್ದರೂ ಅನುಮತಿ ಕೊಟ್ಟಿಲ್ಲ. ಈಗಲೂ ಕೊಟ್ಟಿಲ್ಲ ಅನ್ನೋದಾಗಿ ತಿಮ್ಮಕ್ಕ ಅವರ ಸಾಕು ಮಗ ಉಮೇಶ್, ಫಿಲ್ಮ್ ಚೇಂಬರ್ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ, ಸಪ್ತಮಿ ನಟನೆಯ ʻದಿ ರೈಸ್ ಆಫ್ ಅಶೋಕʼ
ತಿಮ್ಮಕ್ಕನ ಮೇಲೆ ಆರೋಪವೇನು?
ತಿಮ್ಮಕ್ಕನ ವಿರುದ್ಧ ಚಿತ್ರತಂಡದಿಂದ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪವೂ ಕೇಳಿಬಂದಿದೆ. ಚಿತ್ರತಂಡದಿಂದ 25 ಲಕ್ಷ ರೂ. ಹಣದ ಬೇಡಿಕೆ ಜೊತೆಗೆ ಇನ್ನೋವಾ ಕಾರ್ ನೀಡುವಂತೆ ಒತ್ತಡ ಹಾಕಿದ್ದಾರೆ ಅನ್ನೋದು ಸಿನಿಮಾ ಟೀಮ್ ಆರೋಪವಾಗಿದೆ. ಈ ಆರೋಪವನ್ನ ತಿಮ್ಮಕ್ಕನ ಸಾಕುಮಗ ಉಮೇಶ್ ತಳ್ಳಿಹಾಕಿದ್ದಾರೆ.