ಇಂದಿನಿಂದ 8 ದಿನಗಳ ಗ್ರಾಮಗಳೆಡೆಗೆ ನಡಿಗೆ ಆರಂಭ

Public TV
1 Min Read

ಮೈಸೂರು: ಜಿಲ್ಲೆಯ ಸ್ವಾಮಿ ವಿವೇಕಾನಂದ ಯೂಥ್ ಮೂವ್‍ಮೆಂಟ್‍ನಿಂದ ಇವತ್ತಿನಿಂದ ಡಿಸೆಂಬರ್ 29ರವರೆಗೆ ನಮ್ಮೊಳಗಿನ ನಡಿಗೆ ಎಂಬ ಗ್ರಾಮೀಣ ಭಾರತ ನಡಿಗೆ ಶುರುವಾಗಿದೆ.

ಸಂಸ್ಥೆಯ ಡಾ. ಬಾಲಸುಬ್ರಹ್ಮಣ್ಯಂ ಅವರ ನೇತೃತ್ವದಲ್ಲಿ ನಡಿಗೆ ಶುರುವಾಗಿದ್ದು, ಮೈಸೂರು ಸುತ್ತಮುತ್ತಲಿನ 40 ಹಳ್ಳಿಗಳಲ್ಲಿ ಈ ನಡಿಗೆ ನಡೆಯಲಿದೆ. 8 ದಿನಗಳಲ್ಲಿ ಒಟ್ಟು 114 ಕಿ.ಮೀ. ನಡಿಗೆ ಸಾಗಲಿದೆ. ಗ್ರಾಮೀಣ ಜನರೊಂದಿಗೆ ಮಾತಕತೆ, ಗ್ರಾಮಗಳ ಸ್ಥಿತಿ, ಜನರ ಮನಸ್ಥಿತಿ ಅರಿಯುವುದು ಈ ನಡಿಗೆಯ ಉದ್ದೇಶ. ಈ ನಡಿಗೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ಕೇರಳ, ದೆಹಲಿ ರಾಜ್ಯಗಳ ಜನರು ಈ ನಡಿಗೆಯಲ್ಲಿ ಭಾಗವಹಿಸಿದ್ದಾರೆ.

ನಡಿಗೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರು ಸಂಸ್ಥೆಗೆ 10 ಸಾವಿರ ದೇಣಿಗೆ ನೀಡಿದ್ದಾರೆ. ಈ ದೇಣಿಗೆ ಹಣವನ್ನು ಸಂಸ್ಥೆಯು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸಂಸ್ಥೆಗಳಿಗೆ ನೀಡಲಿದೆ. ಈ ನಡಿಗೆಗೆ ಡಿಸಿಎಂ ಅಶ್ವಥ್ ನಾರಾಯಣ್ ಚಾಲನೆ ನೀಡಿದರು. ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜೀ, ಎನ್‍ಆರ್ ಫೌಂಡೇಷನ್ ಅಧ್ಯಕ್ಷ ಗುರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *