ಕೆಆರ್‌ಎಸ್ ವೀಕ್ಷಣೆಗೆ ಬರುವ ಪ್ರವಾಸಿಗರ ಜೇಬಿಗೆ ಕತ್ತರಿ – 500 ಮೀ. ಸೇತುವೆ ದಾಟಲು 200 ರೂ.

Public TV
2 Min Read

ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್‌ನ (KRS) ಬೃಂದಾವನ ಸಹ ಒಂದಾಗಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ನಮ್ಮ ರಾಜ್ಯವಲ್ಲದೇ ಹೊರ ರಾಜ್ಯಗಳಿಂದಲೂ ಪ್ರವಾಸಿಗರ ದಂಡು ಹರಿದು ಬರುತ್ತದೆ. ಮೈಸೂರಿಗೆ ವಿಸಿಟ್ ಕೊಡುವ ಬಹುತೇಕ ಪ್ರವಾಸಿಗರು ಬೃಂದಾವನವನ್ನು ನೋಡಲೇಬೇಕೆಂದು ತಪ್ಪದೇ ಇಲ್ಲಿಗೆ ಅಟೆಂಡೆನ್ಸ್ ಹಾಕುತ್ತಾರೆ. ಹೀಗಿರುವಾಗ ಬರುವ ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಇಲ್ಲಿನ ಕಾವೇರಿ ನೀರಾವರಿ ನಿಗಮ ಹಾಗೂ ಜಿಲ್ಲಾಡಳಿತ ವಾತಾವರಣವನ್ನು ನಿರ್ಮಾಣ ಮಾಡಬೇಕು. ಆದರೆ ಅದರ ಬದಲಿಗೆ ಪ್ರವಾಸಿಗರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡಲಾಗುತ್ತಿದೆ.

ಕೆಆರ್‌ಎಸ್ ಡ್ಯಾಂ ಎದುರು ಬೃಂದಾವನಕ್ಕೆ ಹಾಗೂ ಅಕ್ಕಪಕ್ಕದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕಾವೇರಿ ನದಿಗೆ ಅಡ್ಡಲಾಗಿ 7 ಕೋಟಿ ವೆಚ್ಚದಲ್ಲಿ 2003-04ರಲ್ಲಿ 500 ಮೀಟರ್ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಈ 7 ಕೋಟಿಯನ್ನು ಪಡೆಯುವ ಉದ್ದೇಶದಿಂದ ನಾಲ್ಕು ಚಕ್ರದ ವಾಹನಗಳಿಗೆ 50 ರೂ. ಹಾಗೂ 6 ಚಕ್ರದ ವಾಹನಗಳಿಗೆ 100 ರೂ.ಗಳನ್ನು ಟೋಲ್ ಮೂಲಕ ವಸೂಲಿ ಮಾಡಲಾಗುತ್ತಿತ್ತು. ಸದ್ಯ ಈ ಟೋಲ್ ಮೂಲಕ ಸಂಗ್ರಹ ಮಾಡಿದ ಹಣ ಸೇತುವೆ ನಿರ್ಮಾಣಕ್ಕೆ ಖರ್ಚಾದ ಹಣಕ್ಕಿಂತ ದುಪ್ಪಟ್ಟು ಹಣ ಸಂಗ್ರವಾಗಿದೆ. ಇದನ್ನೂ ಓದಿ: ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ – ಉತ್ತರ ಕನ್ನಡದಲ್ಲಿ ಇಂದು ಶಾಲೆಗಳಿಗೆ ರಜೆ

ಟೋಲ್ ಮೂಲಕ ಈಗಾಗಲೇ ದುಪ್ಪಟ್ಟು ಹಣ ಸಂಗ್ರಹವಾದರೂ ಸಹ ಇದೀಗ ಕಳೆದ ಒಂದು ವಾರದಿಂದ ಇಲ್ಲಿನ ಟೋಲ್ ದರವನ್ನು ಒನ್ ಟು ಡಬಲ್ ಹೆಚ್ಚಿಸಲಾಗಿದೆ. 50 ರೂ. ಇದ್ದ ಟೋಲ್ ದರ 100, 50 ರೂ. ಇದ್ದ ಪಾರ್ಕಿಂಗ್ 100 ರೂ. ಎರಡು ಸೇರಿ 200 ರೂ. ಟೋಲ್‌ನಲ್ಲಿಯೇ ವಸೂಲಿ ಮಾಡಲಾಗುತ್ತದೆ. ಒಂದು ವೇಳೆ ಬೃಂದಾವನಕ್ಕೆ ಹೋಗಲಿಲ್ಲ ಅಂದರೆ ಅಕ್ಕ-ಪಕ್ಕದ ಹಳ್ಳಿಯವರು ಸೇರಿದಂತೆ ಎಲ್ಲರೂ 100 ರೂ. ನೀಡಬೇಕಿದೆ. ಇದಲ್ಲದೇ ಬೃಂದಾವನ ಪ್ರವೇಶಕ್ಕೆ 50 ರೂ. ಇದ್ದ ಟಿಕೆಟ್ ದರವನ್ನು ಇದೀಗ 100 ರೂ. ಮಾಡಲಿದೆ. ಈ ದರ ಏರಿಕೆ ಪ್ರವಾಸಿಗರ ಆಕ್ರೋಶಕ್ಕೆ ಸಹ ಕಾರಣವಾಗುತ್ತಿದೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಸರಣಿ ಅಪಘಾತ – ಬೈಕ್ ಸವಾರನಿಗೆ ಗಾಯ

Share This Article