ನೋಟ್ ಬದಲಿಸಿಕೊಟ್ಟ ಚಂದ್ರಕಾಂತ್‍ಗೆ ಸರ್ಕಾರದ ಕೊಡುಗೆ – ರಾಮಲಿಂಗಂ ಕಂಪನಿಗೆ 150 ಕೋಟಿ ಕಾಮಗಾರಿ

Public TV
1 Min Read

ಬೆಂಗಳೂರು: ಸಿಎಂ ಆಪ್ತ ಅಧಿಕಾರಿ ಜಯಚಂದ್ರಗೆ ಹಳೆಯ ನೋಟುಗಳಿಗೆ ಹೊಸ 2 ಸಾವಿರ ಮುಖಬೆಲೆ ನೋಟನ್ನು ಬದಲಾಯಿಸಿಕೊಟ್ಟಿದ್ದ ಪ್ರಮುಖ ಆರೋಪಿ ಚಂದ್ರಕಾಂತ್‍ಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ.

ಬಿಬಿಎಂಪಿ ನಗರೋತ್ಥಾನ ನಿಧಿಯಿಂದ 150 ಕೋಟಿ ವೆಚ್ಚದ ಮಳೆ ನೀರು ಕಾಲುವೆ ಕಾಮಗಾರಿ ಯೋಜನೆಯನ್ನು ಚಂದ್ರಕಾಂತ್ ಒಡೆತನದ ರಾಮಲಿಂಗಂ ಅಂಡ್ ಸನ್ಸ್ ಕಂಪನಿಗೆ ನೀಡಲಾಗಿದೆ. ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಬಿಎಂಪಿಯ ಈ ಟೆಂಡರ್‍ಗೆ ಗ್ರೀನ್ ಸಿಗ್ನಲ್ ದೊರೆತಿದ್ದು, ಒಟ್ಟು 850 ಕೋಟಿ ರೂಪಾಯಿ ಯೋಜನೆಯಲ್ಲಿ 150 ಕೋಟಿ ರೂಪಾಯಿ ಕಾಮಗಾರಿ ಚಂದ್ರಕಾಂತ್ ಕಂಪನಿ ಪಾಲಾಗಿದೆ.

ಸರ್ಕಾರದ ಈ ಕೊಡುಗೆ ನೋಡಿದ್ರೆ ಚಂದ್ರಕಾಂತ್ ಹೊಸ ನೋಟು ಬದಲಾವಣೆ ಕಾರ್ಯಕ್ಕೆ ಸರ್ಕಾರ ಋಣ ತೀರಿಸುತ್ತಿದ್ಯಾ ಅನ್ನೋ ಅನುಮಾನ ಮೂಡಿದೆ. ಇದು ಹೊಸ ವಿವಾದಕ್ಕೆ ನಾಂದಿ ಹಾಡುವ ಸಾಧ್ಯತೆ ಹೆಚ್ಚಾಗಿದೆ.

Share This Article
Leave a Comment

Leave a Reply

Your email address will not be published. Required fields are marked *