ಎಲೆಕ್ಟ್ರಾನಿಕ್ಸ್ ಸಿಟಿ ಪಕ್ಕದಲ್ಲೊಂದು ಜಂಗಲ್ ರಾಜ್

Public TV
1 Min Read

ಬೆಂಗಳೂರು: ರೌಡಿಯೊಬ್ಬ ಕ್ಷುಲಕ ಕಾರಣಕ್ಕಾಗಿ ರಸ್ತೆಯಲ್ಲೇ ಚಾಕು ಹಿಡಿದು ಎಲೆಕ್ಟ್ರಾನಿಕ್ಸ್ ಸಿಟಿಗೆ ಸಮೀಪದಲ್ಲಿರುವ ಶಾಂತಿಪುರದ ಮುಖ್ಯ ರಸ್ತೆಯಲ್ಲಿ ಓಡಾಡಿದ್ದಾನೆ.

ಹುಟ್ಟಿದ ಹಬ್ಬಕ್ಕಾಗಿ ಬ್ಯಾನರ್ ಕಟ್ಟಿದಕ್ಕೆ ಜೆಸಿ ರಾಮಚಂದ್ರ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ತನ್ನ ಅನುಮತಿ ಪಡೆಯದೇ ಬ್ಯಾನರ್ ಕಟ್ಟಿದಕ್ಕೆ ಅವಾಜ್ ಹಾಕಿದ್ದಾನೆ. ಈ ಊರಲ್ಲಿ ಯಾರೇ ಬ್ಯಾನರ್ ಕಟ್ಟಬೇಕೆಂದರೇ ನನ್ನ ಅನುಮತಿ ಪಡೆಯಬೇಕು ಮತ್ತು ಇಲ್ಲಿರುವ ಎಲ್ಲಾ ಅಂಗಡಿಯವರು ಹಪ್ತಾ ನೀಡಬೇಕು ಇಲ್ಲದಿದ್ದಲ್ಲಿ ಗೂಸಾ ಗ್ಯಾರೆಂಟಿ ಎಂದು ಚಾಕು ಹಿಡಿದು ಎಲ್ಲರನ್ನು ಬೆದರಿಸಿದ್ದಾನೆ.

ರಾಮಚಂದ್ರ ಅಲಿಯಾಸ್ ಜೆಸಿ ರಾಮಚಂದ್ರ ಚಾಕು ಹಿಡಿದು ಓಡಾಡಿದ ಪುಡಿ ರೌಡಿ. ಈಗಾಗಲೇ ಕೊಲೆ ಪ್ರಕರಣವೊಂದರಲ್ಲಿ ಏಳು ವರ್ಷ ಜೈಲಿನಲ್ಲಿದ್ದ ರಾಮಚಂದ್ರ, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಆದರೆ ಈತನ ಮೇಲೆ ರೌಡಿಶೀಟರ್ ತೆಗೆಯದೆ ಇರೋದು ರಾಮಚಂದ್ರ ಮತ್ತು ಪೊಲೀಸರ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಇವನಿಗೆ ಆನೇಕಲ್‍ನ ಪ್ರಭಾವಿ ಕಾಂಗ್ರೆಸ್ ನಾಯಕರ ಬೆಂಬಲವಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಹೀಗೆ ಚಾಕು ಹಿಡಿದು ನಡು ರಸ್ತೆಯಲ್ಲೇ ಅವಾಜ್ ಹಾಕಿಕೊಂಡು ಓಡಾಡಿದರು ಪೊಲೀಸರು ಮಾತ್ರ ಇದೂವರೆಗೂ ಯಾವುದೇ ಕ್ರಮಕೈಗೊಂಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *