ಗಲಾಟೆಗೆ ಕೇಸ್ ಇಲ್ಲದೇ ರೌಡಿಶೀಟರ್ ಓಪನ್, ಕೊಲೆಗಳಿಗೆ ಅದೆಷ್ಟು ರೌಡಿಶೀಟರ್ ತೆರೆದಿದ್ದೀರಿ? – ರೇವಣ್ಣ ಕಿಡಿ

Public TV
1 Min Read

– ನಾನು ಕಾಲ್ ಮಾಡಿ ಕೇಸ್ ಹಾಕಿ ಎಂದಿದ್ರೆ ರಾಜಕೀಯ ಬಿಟ್ಬಿಡ್ತೀನಿ!

ಹಾಸನ: ನಾನು ಯಾರ ಮೇಲಾದ್ರೂ ಕೇಸ್ ಹಾಕಿ ಎಂದು ಫೋನ್ ಮಾಡಿದ್ರೆ ರಾಜಕೀಯ ಬಿಟ್ಟು ಹೋಗ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ಗುಡುಗಿದ್ದಾರೆ.

ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಪೊಲೀಸ್ ಇಲಾಖೆ ಬಗ್ಗೆ ನೀಡಿದ್ದ ಹೇಳಿಕೆ ವಿಚಾರವಾಗಿ ಸಂಸದ ಶ್ರೇಯಸ್ ಪಟೇಲ್ (Shreyas Patel) ನೀಡಿದ್ದ ಪ್ರತಿಕ್ರಿಯೆ ವಿರುದ್ಧ ಅವರು ಅಸಮಾಧಾನ ಹೊರಹಾಕಿದರು. ಇವರಿಗೆಲ್ಲಾ ಉತ್ತರ ಕೊಡಲು ಹೋದ್ರೆ ನಾನು ಪೊಳ್ಳೆದ್ದು ಹೋಗ್ತೇನೆ. ಅವರು ದೊಡ್ಡವರಿದ್ದಾರೆ, ಅವರಿಗೆ ಹೇಳಿಕೆ ಕೊಡುವ ಶಕ್ತಿ ನನಗಿಲ್ಲ. ನಾನು ಶಾಸಕನಾಗಿ ಸುಳ್ಳು ಹೇಳಲು ಆಗಲ್ಲ ಎಂದಿದ್ದಾರೆ. ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ – DRI, ED ಬಳಿಕ ಈಗ IT ಎಂಟ್ರಿ

ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯ ಬಸವಘಟ್ಟ ಗ್ರಾಮದಲ್ಲಿ ಓರ್ವ ಗ್ರಾಪಂ ಸದಸ್ಯ, ಗುತ್ತಿಗೆದಾರ ಹಾಗೂ ಸದಸ್ಯನ ನಡುವೆ ಗಲಾಟೆಯಾಗಿದೆ. ಗಲಾಟೆ ಅದಾಗ ಏನು ಕ್ರಮ ಮಾಡಬೇಕು ಮಾಡಲಿ. ಅದು ಬಿಟ್ಟು ಯಾವುದೇ ಕೇಸ್ ಇಲ್ಲದೇ ರೌಡಿಶೀಟರ್ ಹಾಕಿದ್ದಾರೆ. ಹಾಗಿದ್ದರೆ ಕೊಲೆ, ಕೊಲೆ ಯತ್ನ ಮಾಡಿದವರ ಮೇಲೆ ಎಷ್ಟು ರೌಡಿಶೀಟರ್ ಓಪನ್ ಮಾಡಿದ್ದೀರಿ ಎಂದು ಪೊಲೀಸರಿಗೆ ಅವರು ಪ್ರಶ್ನಿಸಿದ್ದಾರೆ.

ನಾನು ಅಧಿಕಾರಿಗಳಿಗೆ ಹೇಳೋದು ಒಂದೇ, ಯಾರೇ ತಪ್ಪು ಮಾಡಿದ್ರೂ, ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಇತ್ತೀಚೆಗೆ ರೇವಣ್ಣ ಅವರು ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಂಸದರು, ರೇವಣ್ಣ ಅಸ್ಪಷ್ಟ ಆರೋಪಗಳನ್ನು ಮಾಡುವ ಬದಲು, ನಿರ್ದಿಷ್ಟ ಮಾಹಿತಿಯನ್ನು ನೀಡಲಿ ಎಂದಿದ್ದರು. ಇದನ್ನೂ ಓದಿ: ಚಿಕ್ಕಮಗಳೂರು | ಆಪರೇಷನ್ ಸಿಂಧೂರದಲ್ಲಿ ಗಾಯಗೊಂಡಿದ್ದ ವೀರ ಯೋಧನಿಗೆ ಸನ್ಮಾನ

Share This Article