ಹುಬ್ಬಳ್ಳಿಯಲ್ಲಿ ಹಿಟ್‍ಮ್ಯಾನ್ – ಮಳೆಯಲ್ಲೂ ದ್ವಿಶತಕ ವೀರನ ನೋಡಲು ಮುಗಿಬಿದ್ದ ಜನ

Public TV
1 Min Read

ಹುಬ್ಬಳ್ಳಿ: ಕ್ರಿಕೆಟಿಗ ರೋಹಿತ್ ಶರ್ಮಾ ಇಂದು ಹುಬ್ಬಳ್ಳಿಗೆ ಭೇಟಿ ನೀಡಿದ್ದು, ಅವರನ್ನು ನೋಡಲು ಅಭಿಮಾನಿಗಳು ಮಳೆಯನ್ನು ಲೆಕ್ಕಿಸದೇ ಮುಗಿಬಿದ್ದಿದ್ದಾರೆ.

ಇಂದು ನಗರದಲ್ಲಿರುವ ಕ್ರಿಕ್ ಕಿಂಗ್ ಡಮ್ ಸಂಸ್ಥೆಯೊಂದಿಗೆ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಉದ್ಘಾಟನೆಗೆ ಆಗಮಿಸಿದ್ದ ರೋಹಿತ್ ಶರ್ಮಾರನ್ನು ನೋಡಲು ಅಭಿಮಾನಿಗಳು ಮಳೆಯನ್ನು ಲೆಕ್ಕಿಸದೇ ಬಂದು ಮುಗಿಬಿದ್ದು ಜನಜಂಗುಳಿಯಲ್ಲಿ ಪರದಾಡಿದರು.

ಕ್ರಿಕೆಟ್ ಅಕಾಡೆಮಿ ಉದ್ಘಾಟಿಸಿದ ರೋಹಿತ್ ಶರ್ಮಾ ನಂತರ ಮಾತನಾಡಿ, ನಾನು ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ್ದೇನೆ. ಭಾರತ ಕ್ರಿಕೆಟ್ ತಂಡಕ್ಕೆ ಕರ್ನಾಟಕದ ಕೊಡುಗೆ ಸಾಕಷ್ಟಿದೆ ಎಂದು ಶ್ಲಾಘಿಸಿದರು. ಇದೇ ವೇಳೆ ಮಕ್ಕಳಿಗೆ ಆಟೋಗ್ರಾಫ್ ಹಾಕಿ ಕ್ರಿಕೆಟ್ ಬ್ಯಾಟ್ ನೀಡಿದರು. ರೋಹಿತ್ ಶರ್ಮಾ ಅವರನ್ನು ಶಾಲು ಹಾಕಿ ಸನ್ಮಾನ ಮಾಡಲಾಯಿತು.

ಈಗ ಸದ್ಯ ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಭಾರತದ ತಂಡದ ಟಿ-20 ತಂಡದ ನಾಯಕತ್ವದ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ರೋಹಿತ್ ಶರ್ಮಾ ಬಾಂಗ್ಲಾದೇಶದ ವಿರುದ್ಧ ನವೆಂಬರ್ 3 ರಿಂದ ಆರಂಭವಾಗುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಕೃಣಾಲ್ ಪಾಂಡ್ಯ, ಯಜುವೇಂದ್ರ ಚಹಲ್, ರಾಹುಲ್ ಚಹರ್, ದೀಪಕ್ ಚಹಾರ್, ಖಲೀಲ್ ಅಹ್ಮದ್, ಶಿವಂ ದುಬೆ, ಶಾರ್ದುಲ್ ಠಾಕೂರ್.

Share This Article
Leave a Comment

Leave a Reply

Your email address will not be published. Required fields are marked *