ಕ್ರಮ ಸಂಖ್ಯೆ 20, ನಿಖಿಲ್‍ಗೆ ಆಪತ್ತು ಎಂದ ಅಭಿಮಾನಿಗಳಿಗೆ ಅಷ್ಟೇ ಸಾಕು ಬಿಡ್ರೋ ಎಂದ ಯಶ್

Public TV
1 Min Read

ಮಂಡ್ಯ: ರಾಕಿಂಗ್ ಸ್ಟಾರ್ ಯಶ್ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಅಭಿಮಾನಿಗಳಿಗೆ ಕ್ರಮ ಸಂಖ್ಯೆ ಎಷ್ಟು ಎಂದು ಕೇಳಿದ್ದಾಗ ಅಭಿಮಾನಿಗಳು ಕ್ರಮ ಸಂಖ್ಯೆ 20, ನಿಖಿಲ್‍ಗೆ ಆಪತ್ತು ಎಂದು ಹೇಳಿದ್ದಾರೆ.

ಯಶ್ ಇಂದು ಮಳವಳ್ಳಿ ತಾಲೂಕಿನ 33 ಹಳ್ಳಿಗಳಲ್ಲಿ ರಾಕಿಂಗ್ ಸ್ಟಾರ್ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಯಶ್ ಹೋದ ಕಡೆಯಲೆಲ್ಲಾ ಅಭಿಮಾನಿಗಳು ಹೂವು ಹಾಗೂ ಮುತ್ತಿನ ಸುರಿಮಳೆ ಮಾಡುತ್ತಿದ್ದಾರೆ. ವೈ ಬಾಸ್ ಹಾಗೂ ರಾಕಿ ಬಾಯ್ ಎಂದು ಜೈಕಾರ ಕೂಗುತ್ತಿದ್ದಾರೆ.

ಯಶ್ ಕ್ರಮ ಸಂಖ್ಯೆ 20 ಅಂದಾಕ್ಷಣ ಅಭಿಮಾನಿಗಳು ನಿಖಿಲ್‍ಗೆ ಆಪತ್ತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆಗ ಯಶ್ 20 ಅಷ್ಟೇ ಸಾಕು ಬಿಡ್ರೋ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.

ಯಶ್ ಮಾತನಾಡಲು ಮುಂದಾದಾಗ ಗ್ರಾಮಸ್ಥರು ನೆರಳಲ್ಲಿ ನಿಂತು ಮಾತನಾಡಿ ಎಂದರು. ಆಗ ಯಶ್ ನೀವು ನೆರಳಿನಲ್ಲಿ ಇರಿ ಅಂತಿರಾ. ಆದರೆ ಅವರು ನೋಡಿದರೆ ಬಿಸಿಲೇ ನೋಡಿಲ್ಲ ನಾವು ಅಂತಾರೆ ಎಂದು ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಯನ್ನು ನೆನಪು ಮಾಡಿಕೊಂಡರು. ಮಂಡ್ಯದ ಡಿ.ಕೆ ಹಳ್ಳಿಯಲ್ಲಿ ಪ್ರಚಾರದ ವಾಹನದಲ್ಲಿದ ಯಶ್ ಜೊತೆ ಅಭಿಮಾನಿಯೊಬ್ಬರು ಸೆಲ್ಫಿ ಕ್ಲಿಕಿಸಿಕೊಂಡು ಮುತ್ತಿಟ್ಟಿದ್ದಾರೆ. ಇನ್ನು ಯಶ್ ಪ್ರಚಾರದ ವಾಹನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಧ್ವಜಗಳು ಎಲ್ಲೆಲ್ಲೂ ರಾರಾಜಿಸುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *