ಉಜಿರೆಯ ಸುರ್ಯ ದೇವಸ್ಥಾನಕ್ಕೆ ರಾಧಿಕಾ ಜೊತೆಗೂಡಿ ಆಗಮಿಸಿ ಹರಕೆ ತೀರಿಸಿದ ಯಶ್‌

Public TV
1 Min Read

ಮಂಗಳೂರು: ನಟ ಯಶ್‌ (Yash) ಅವರು ಬೆಳ್ತಂಗಡಿ ತಾಲೂಕಿನಲ್ಲಿರುವ ಉಜಿರೆಯ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ (Shree Sadashiva Rudra Temple) ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ.

ಇಂದು ಬೆಳಗ್ಗೆ ನಟಿ ರಾಧಿಕಾ, ಮಕ್ಕಳ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಕುಟುಂಬದ ಮಣ್ಣಿನ ಮೂರ್ತಿ ಮತ್ತು ಮಣ್ಣಿನ ಫಿಲ್ಮ್ ರೀಲ್‌ ಹರಕೆಯನ್ನು ಯಶ್‌ ತೀರಿಸಿದರು.

ಈ ಭೇಟಿಯ ವೇಳೆ ಟಾಕ್ಸಿಕ್ (Toxic) ಚಲನಚಿತ್ರದ ನಿರ್ಮಾಪಕ ವೆಂಕಟ್‌ ಅವರು ಸಾಥ್ ನೀಡಿದರು.

ಸುರ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಯಶ್‌ ಅವರು ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನಕ್ಕೆ (Shri Dharmasthala Manjunatheshwara Temple) ಭೇಟಿ ನೀಡಲಿದ್ದಾರೆ.

 

Share This Article