ವಿಡಿಯೋ: ಗೇಟ್ ಮುರಿದು ದೇವಸ್ಥಾನದೊಳಗೆ ಹೋಗಿ ಭಯದಿಂದ ಹೊರಬಂದ ಕಳ್ಳ

Public TV
1 Min Read

ಮೈಸೂರು: ದೇವಸ್ಥಾನದಲ್ಲಿ ಕಳ್ಳತನಕ್ಕೆ ಬಂದವನು ಸುಸೂತ್ರವಾಗಿ ದೇವಸ್ಥಾನದ ಗೇಟ್ ಮುರಿದು ಒಳಹೋಗಿ ದೇವಸ್ಥಾನದಲ್ಲಿದ್ದ ಬಂಗಾರ, ಹುಂಡಿಯ ದುಡ್ಡು ಏನ್ನನ್ನೂ ಕದಿಯದೆ ಭಯದಿಂದ ಹೊರಬಂದಿರುವ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ.

ಶನಿ ದೇವರ ದೇವಸ್ಥಾನದಲ್ಲಿ ಕಳ್ಳ ಹೆದರಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮೈಸೂರಿನ ದಟ್ಟಗಳ್ಳಿಯಲ್ಲಿನ ಶನಿ ದೇವರ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಶನಿ ದೇವರ ದೇವಸ್ಥಾನ ಕಳ್ಳತನಕ್ಕೆ ಕಳ್ಳ ನುಗ್ಗಿದ್ದು, ದೇವಸ್ಥಾನದ ಬಾಗಿಲನ್ನು ಕಬ್ಬಿಣದ ಸಲಾಕೆಯಿಂದ ಮುರಿದು ಒಳಪ್ರವೇಶಿಸಿದ್ದಾನೆ. ನಂತರ ಗಾಬರಿಯಿಂದ ಬರಿಗೈಯಲ್ಲಿ ಹೊರಬಂದಿದ್ದಾನೆ. ಶನಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದೇವಸ್ಥಾನದ ಗೇಟ್ ಮುರಿದು ಒಳಗೆ ಹೋದವನು ಏನೂ ಕಳ್ಳತನ ಮಾಡದೆ ಬರಿಗೈಯಲ್ಲಿ ವಾಪಸ್ ಬಂದುರುವುದು ಸ್ಪಷ್ಟವಾಗಿದೆ. ಹಿಂದೆ ಎರಡು ಬಾರಿ ಈ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಈ ಬಗ್ಗೆ ಕುವೆಂಪುನಗರ ಪೊಲೀಸರಿಗೆ ದೇವಸ್ಥಾನದ ಆಡಳಿತ ಮಂಡಳಿಯವರು ದೂರು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *