ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಜಲ ದಿಗ್ಭಂಧನ

Public TV
1 Min Read

ಮಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಗಳು ಭಾರೀ ಮಳೆಯಿಂದಾಗಿ ನೀರಿನಿಂದ ಆವೃತವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಉದ್ದನೆಯಲ್ಲಿ ರಸ್ತೆಗೆ ನೀರು ನುಗ್ಗಿದೆ.

ಗುಂಡ್ಯಾ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕ ಕಡಿತವಾಗಿದೆ. ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯ ಸಂಪರ್ಕಿಸುವ ಹೊಸ್ಮಠ ಸೇತುವೆಯೂ ಕೂಡ ಬಂದ್ ಆಗಿದ್ದು, ಪುತ್ತೂರಿನ ಮಾರ್ಗವಾಗಿ ಬೆಳ್ಳಾರೆ ಮೂಲಕ ಸುತ್ತು ಬಳಸಿ ಸುಬ್ರಹ್ಮಣ್ಯಕ್ಕೆ ಬರಲಿರುವ ಸಿಎಂ ಕುಮಾರಸ್ವಾಮಿ ಗೆ ಕುಕ್ಕೆ ಯಲ್ಲಿ ದೋಷ ನಿವಾರಣಾ ಪೂಜೆಗೆ ವಿಘ್ನ ಸಂಭವಿಸಿದೆ.

ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರಟ ಸಿಎಂ ಕುಟುಂಬ ನಿನ್ನೆ ರಾತ್ರಿ ಧರ್ಮಸ್ಥಳ ದಲ್ಲಿ ಪೂಜೆ ಸಲ್ಲಿಸಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸೇರಿದಂತೆ ಕುಟುಂಬ ಸಮೇತ ಅಲ್ಲೇ ತಂಗಿದ್ದರು. ಕುಮಾರಸ್ವಾಮಿ ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೆಟ್ಟ ದೃಷ್ಟಿ ಮತ್ತು ದೋಷ ನಿವಾರಣೆಗಾಗಿ ನಾಗಪೂಜೆ ಮಾಡಿಸುತ್ತಿದ್ದು, ಮಧ್ಯಾಹ್ನ ವರೆಗೆ ಸಿಎಂ ಕುಟುಂಬ ವಿಶೇಷ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *