– ಮುಸಲ್ಮಾನ ವ್ಯಕ್ತಿ ಪ್ರಚೋದನಕಾರಿ ಭಾಷಣ ಮಾಡಿದ್ರೆ, ಭಯೋತ್ಪಾದಕನ ರೀತಿಯಲ್ಲಿ ಬಂಧನ
– ಮೃತನ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂ. ಪರಿಹಾರ ನೀಡ್ಬೇಕು
ಮಂಗಳೂರು: ಪ್ರಚೋದನಕಾರಿ ಭಾಷಣ ಮಾಡಿದ್ರೆ ಬಂಧನ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ ಅಂತ ಹೇಳ್ತಾರೆ. ಆದರೆ ಮುಸಲ್ಮಾನ ವ್ಯಕ್ತಿ ಮಾಡಿದ್ರೆ ಭಯೋತ್ಪಾದಕನ ರೀತಿಯಲ್ಲಿ ಬಂಧನ ಮಾಡ್ತಾರೆ. ಆದರೆ ಸಂಘ ಪರಿವಾರದ ವ್ಯಕ್ತಿ ಮಾಡಿದರೆ ಯಾವುದೇ ಕ್ರಮ ಇಲ್ಲ ಎಂದು ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಜ್ ಕಡಂಬು (Riyaz Kadambu) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ (Mangaluru) ಮಾತನಾಡಿದ ಅವರು, ಅಮಾಯಕ ಮುಸ್ಲಿಂ ಯುವಕ ಅಬ್ದುಲ್ ರಹಿಮಾನ್ (Abdul Rahiman) ಹತ್ಯೆ ನಡೆದಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಮೂರು ಕೊಲೆಗಳಾಗಿದೆ. ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಆಗಿದೆ. ಕುಡುಪುವಿನಲ್ಲಿ ಅಮಾಯಕ ಅಶ್ರಫ್ನನ್ನ ಗುಂಪು ಹತ್ಯೆ ಮಾಡಿದರು. ಆ ಬಳಿಕ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಬಳಿಕ ಪ್ರಚೋದನೆ ಹೆಚ್ಚಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ರಾಜಕಾರಣಿಗಳೊಂದಿಗೆ ವೇದಿಕೆ ಹಂಚಿಕೊಂಡ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್
ಆ ಬಳಿಕ ಕೆಲ ಬಿಜೆಪಿ, ಭಜರಂಗದಳದ ದ್ವೇಷ ಭಾಷಣಕಾರರು ಮುಸ್ಲಿಂ ಸಮುದಾಯವನ್ನು ಗುರಿ ಮಾಡಿದರು. ರೌಡಿಶೀಟರ್ ಕೊಲೆಗೆ ಪ್ರತೀಕಾರವಾಗಿ ಮನೆಗೆ ನುಗ್ಗಿ ಕೊಚ್ಚಿ ಹಾಕ್ತೇವೆ ಎಂದರು. ಭರತ್ ಕುಮ್ಡೇಲು, ಶರಣ್ ಪಂಪ್ವೆಲ್ ಹೇಳಿಕೆ ನೀಡಲು ಆರಂಭ ಮಾಡಿದರು. ಕಾಂಗ್ರೆಸ್ ಆಡಳಿತದಲ್ಲೂ ಇಂತಹ ಘಟನೆಗಳು ನಡೀತಾ ಇದೆ. ನಾವು ಇಲ್ಲಿನ ಪೊಲೀಸ್ ಅಧಿಕಾರಿಗಳಿಗೆ ಇದರ ಗಂಭೀರತೆ ಬಗ್ಗೆ ಹೇಳ್ತಾ ಇದ್ದೆವು. ಇಲ್ಲಿ ಅಘೋಷಿತ ಕರ್ಪ್ಯೂ, ಭಯದ ವಾತಾವರಣ ಇದೆ ಎಂದಿದ್ದೇವೆ. ಆದರೆ ಪೊಲೀಸರು ಕಾಟಾಚಾರಕ್ಕೆ ಎಫ್ಐಆರ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಳೆ ನೀರು ಸರಾಗವಾಗಿ ಹರಿಯಲು ಅಡ್ಡವಿರುವ ಕಟ್ಟಡ ತೆರವಿಗೆ ಸೂಚನೆ: ಡಿಕೆಶಿ
ಎಫ್ಐಆರ್ ಆದ ನಂತರ ದ್ವೇಷ ಭಾಷಣಕಾರರ ಬಂಧನ ಆಗಿಲ್ಲ. ಬಂಧನ ಮಾಡಿದ್ರೂ ಜಾಮೀನಿನ ಮೇಲೆ ಬಂದು ರಾಜಾರೋಷವಾಗಿ ಮಾತನಾಡ್ತಾ ಇದ್ದಾರೆ. ಜಿಲ್ಲೆಯಲ್ಲಿ 7 ಗಂಟೆಗೆ ಬಂದ್ ಆಗ್ತದೆ ಎಂದು ಡಿಸಿಎಂ ಹೇಳ್ತಾರೆ. ಆದರೆ ಅದನ್ನು ಪರಿಹಾರ ಮಾಡುವ ಕೆಲಸ ಸರ್ಕಾರ ಮಾಡುತ್ತಿಲ್ಲ. ಅಮಾಯಕ ಯುವಕ ಅಬ್ದುಲ್ ರಹಿಮಾನ್ನನ್ನ ಪೂರ್ವ ನಿಯೋಜಿತವಾಗಿ ಹತ್ಯೆ ಮಾಡಲಾಗಿದೆ. ಅತ್ಯಂತ ಭೀಕರವಾಗಿ ಕೊಚ್ಚಿ ರಹಿಮಾನ್ ಕೊಲೆ ಮಾಡಲಾಗಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಪ್ರಚೋದನಕಾರಿ ಹೇಳಿಕೆ, ದ್ವೇಷ ಭಾಷಣ ಹೆಚ್ಚಾಗ್ತಿದೆ. ಇವರಿಗೆ ಒಬ್ಬ ಮುಸಲ್ಮಾನನ ಕೊಲೆ ಆಗಬೇಕಿತ್ತು. ಅದನ್ನ ಮಾಡಿದ್ದಾರೆ. ಕೊಲೆ ಆದಾಗ ಗೃಹ ಸಚಿವರು ಬಂದು ಸಭೆ ಮಾಡಿ ಭರವಸೆ ಕೊಟ್ಟು ಹೋಗ್ತಾರೆ. ಇದು ಈ ಸರ್ಕಾರದ ಸಂಪೂರ್ಣ ವೈಫಲ್ಯ. ಮುಸ್ಲಿಂ ಯುವಕರ ಜೀವಕ್ಕೆ ಬೆಲೆ ಇಲ್ಲದಾಗಿದೆ. ಪ್ರಚೋದನಕಾರಿ ಭಾಷಣ ಮಾಡಿದ್ರೆ ಬಂಧನ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ ಅಂತ ಹೇಳ್ತಾರೆ. ಮುಸಲ್ಮಾನ ವ್ಯಕ್ತಿ ಮಾಡಿದ್ರೆ ಭಯೋತ್ಪಾದಕನ ರೀತಿಯಲ್ಲಿ ಬಂಧನ ಮಾಡ್ತಾರೆ. ಆದರೆ ಸಂಘ ಪರಿವಾರದ ವ್ಯಕ್ತಿ ಮಾಡಿದರೆ ಯಾವುದೇ ಕ್ರಮ ಇಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಭಾರೀ ಹಿನ್ನಡೆ – ಹುಬ್ಬಳ್ಳಿ ಗಲಭೆ ಸೇರಿದಂತೆ 43 ಕ್ರಿಮಿನಲ್ ಕೇಸ್ ಹಿಂದಕ್ಕೆ ಪಡೆದ ಆದೇಶವೇ ರದ್ದು
ಶರಣ್ ಪಂಪ್ವೆಲ್ನನ್ನ ನಾಟಕ ಮಾಡಲು ಬಂಧನ ಮಾಡಿದ್ದಾರೆ. ದುರ್ಬಲ ಸೆಕ್ಷನ್ ಹಾಕಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ. ಕದ್ರಿ ಪೊಲೀಸ್ ಠಾಣೆ ಎದುರು ಹಿಂದೂ ಕಾರ್ಯಕರ್ತರು ಜಮೆ ಆದಾಗ ಪೊಲೀಸರು ಯಾಕೆ ತಡೆಯಲಿಲ್ಲ. ಇವರ ಬಂದೂಕಿನಲ್ಲಿ ಗುಂಡು ಇರಲಿಲ್ವಾ ಅಥವಾ ಕೈಯ್ಯಲ್ಲಿ ಲಾಠಿ ಇರಲಿಲ್ವಾ? ಜಿಲ್ಲೆಯ ಕಾನೂನು ಸುವ್ಯವಸ್ಥೆ ಸರಿ ಮಾಡಲು ಇಲ್ಲಿನ ಅಧಿಕಾರಿಗಳ ಬದಲಾವಣೆ ಆಗಬೇಕು. ಹತ್ಯೆ ಪ್ರಕರಣ ವಿಶೇಷ ತನಿಖಾ ದಳದ ಮೂಲಕ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಮೂಲಕ ತನಿಖೆ ಆಗಲಿ ಇಲ್ಲಿನ ಎಲ್ಲಾ ಹತ್ಯೆಗಳ ಬಗ್ಗೆ ನ್ಯಾಯಾಂಗ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.
ರಹಿಮಾನ್ ಒಬ್ಬ ಶ್ರಮ ಜೀವಿ. ಅಂತವರನ್ನ ಕೊಲ್ಲುವುದಾ ಇವರ ವೀರತ್ವ? ಫಾಜಿಲ್ ಕೊಲೆಯಾದಗಲೂ ಒಬ್ಬ ಅಮಾಯಕನ ಕೊಲೆ ಮಾಡಿದ್ರು ಇದನ್ನ ವೀರತ್ವ ಅಂತ ಹೇಳಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ರೀತಿ ಆದರೆ ಜಿಲ್ಲೆಯ ಭವಿಷ್ಯ ಹಾಳಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ನೀರಾವರಿ ಇಲಾಖೆಯಲ್ಲಿ ಹೆಚ್ಚು ಎಂಜಿನಿಯರ್ಗಳಿಲ್ಲ: ಸಿಎಸ್ಗೆ ಖಾರವಾದ ಪತ್ರ ಬರೆದಿದ್ದಕ್ಕೆ ಡಿಕೆಶಿ ಸಮರ್ಥನೆ
ಬಂಟ್ವಾಳದ ಅಬ್ದುಲ್ ರಹಿಮಾನ್ ಬರ್ಬರ ಹತ್ಯೆಯನ್ನು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವೈಯಕ್ತಿಕ ದ್ವೇಷದ ಹತ್ಯೆ ಅಂತ ಬೇಜವಾಬ್ದಾರಿ ಹೇಳಿಕೆ ಕೊಡ್ತಾರೆ. ಸಂಘ ಪರಿವಾರದ ಐಟಿ ಸೆಲ್ ಪೋಸ್ಟ್ ನೋಡಿ ದಿನೇಶ್ ಗುಂಡೂರಾವ್ ಈ ರೀತಿ ಹೇಳಿಕೆ ಕೊಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಹಿರಂಗವಾಗಿ ಕ್ಷಮೆ ಕೇಳದಿದ್ರೆ ಕಮಲ್ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಕೊಡಲ್ಲ: ಸಾರಾ ಗೋವಿಂದು
ಈ ವಿಚಾರದಲ್ಲಿ ಸಿಎಂ ಪ್ರತಿಕ್ರಿಯೆ ನೀಡಿಲ್ಲ. ಡಿಜಿಪಿ ಯಾಕೆ ಈವರೆಗೆ ಜಿಲ್ಲೆಗೆ ಭೇಟಿ ಕೊಟ್ಟಿಲ್ಲ. ಕೊಲೆ ಮಾಡ್ತೇವೆ ಎನ್ನುವ ಭಾಷಣಕಾರರ ಬಂಧನ ಯಾಕೆ ಆಗುತ್ತಿಲ್ಲ. ಇಲ್ಲಿ ಮುಸ್ಲಿಂ ಸಮುದಾಯ ಮತ್ತು ಸಂಘ ಪರಿವಾರಕ್ಕೆ ಒಂದು ನೀತಿ. ಮುಸ್ಲಿಂ ಶಾಸಕರು ಈ ಹತ್ಯೆ ಬಗ್ಗೆ ಒಂದೇ ಒಂದು ಮಾತು ಆಡ್ತಿಲ್ಲ. ಯು.ಟಿ.ಖಾದರ್ ವಿದೇಶದಲ್ಲಿ ಕೂತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾರಿನ ಮೇಲೆ ಮಳೆ ನೀರು ಹಾರಿಸಿದ್ದಕ್ಕೆ ಹಲ್ಲೆ – ಬೆರಳು ಕಚ್ಚಿ ವಿಕೃತಿ ಮೆರೆದ ಮಾಲೀಕ
ಈ ಕೊಲೆಯನ್ನ ಸಂಘ ಪರಿವಾರ ಮತ್ತು ಬಿಜೆಪಿ ಮಾಡಿದೆ. ಈ ಕೊಲೆ ಮಾಡಿದ ಕುಟುಂಬದ ಜೊತೆ ಸರ್ಕಾರ ನಿಲ್ಲಬೇಕಿದೆ. ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರವನ್ನು ಸರ್ಕಾರ ಘೋಷಣೆ ಮಾಡಬೇಕು. ಆಸ್ಪತ್ರೆ ಸೇರಿದ ಯುವಕನ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಿ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.