ಕಾಂತಾರ ಪ್ರೀಕ್ವೆಲ್ ಯಶಸ್ಸಿಗಾಗಿ ರಿಷಬ್ ಶೆಟ್ಟಿ ಸ್ನೇಹಿತರಿಂದ ವಿಶೇಷ ಪೂಜೆ

Public TV
1 Min Read

– ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದ ನಟ – ಸ್ನೇಹಿತರಿಂದಲೇ ಕೇಕ್ ಕಟ್ಟಿಂಗ್

ಕಾಂತಾರ ಪ್ರೀಕ್ವೆಲ್‌ನ (Kantara Chapter 1) ಯಶಸ್ಸು ಹಾಗೂ ನಟ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಶ್ರೇಯಸ್ಸಿಗಾಗಿ ಗೆಳೆಯರು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

ರಿಷಬ್ ಶೆಟ್ಟಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕುಂಭಾಸಿ ಆನೆಗುಡ್ಡೆ ದೇವಸ್ಥಾನಕ್ಕೆ (Kumbhashi Anegudde Temple) ತೆರಳಿ ಪೂಜೆ ಸಲ್ಲಿಸಿದ್ದಾರೆ. 108 ತೆಂಗಿನಕಾಯಿ ಒಡೆದು ಪ್ರಾರ್ಥಿಸಿದ್ದಾರೆ. ಬಳಿಕ ತಮ್ಮ ಕಾರುಗಳಲ್ಲಿ ಕುಂದಾಪುರದ ಪ್ರಮುಖ ಮಾರ್ಗದಲ್ಲಿ ಶುಭ ಹಾರೈಕೆ ಬ್ಯಾನರ್‌ನೊಂದಿಗೆ ಸಂಚರಿಸಿ ಶಾಸ್ತ್ರಿ ಸರ್ಕಲ್ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ರಾಜಮೌಳಿ ಸಿನಿಮಾ ರಿಜೆಕ್ಟ್ ಮಾಡಿದ ನಟ ವಿಕ್ರಂ – ಕಾರಣ ಏನ್ ಗೊತ್ತಾ?

ಯುವ ಮೆರಿಡಿಯನ್ ರೆಸಾರ್ಟ್‌ನಲ್ಲಿ ತಂಗಿರುವ ರಿಷಬ್ ಶೆಟ್ಟಿಯನ್ನು ಭೇಟಿಯಾಗಿ ಶುಭ ಹಾರೈಸಿದ್ದಾರೆ. ರಿಷಬ್ ಶೆಟ್ಟಿ ದಂಪತಿ ಸ್ಟುಡಿಯೋದಿಂದ ಹೊರಬಂದು ಅಭಿಮಾನಿಗಳ ಜೊತೆ ಕೆಲ ಹೊತ್ತು ಕಳೆದಿದ್ದಾರೆ. ಈ ವೀಡಿಯೋವನ್ನು ಆಪ್ತರು ರಿಲೀಸ್ ಮಾಡಿದ್ದಾರೆ.

ಇದಕ್ಕೂ ಮೊದಲು ಹೊಂಬಾಳೆಯ ವಿಜಯ್ ಕಿರಗಂದೂರ್, ಮಾಜಿ ಸಂಸದ ಪ್ರತಾಪ್ ಸಿಂಹ, ಬಾಲ್ಯದ ಗೆಳೆಯರು, ಚಿತ್ರತಂಡದವರು ಡಿವೈನ್ ಸ್ಟಾರ್ ಹುಟ್ಟುಹಬ್ಬದಲ್ಲಿ ಭಾಗಿಯಾದರು. ಕುಟುಂಬದ ಜೊತೆಗಿದ್ದ ರಿಷಬ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಬಯಸಿಲ್ಲ. ಇದನ್ನೂ ಓದಿ: `ಕಾಮದ ಬಣ್ಣ ಕೆಂಪು’ ಎಂದ ಯೋಗರಾಜ್ ಭಟ್

Share This Article