ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಬಿದರಿಗೆ ಮಾತೃ ವಿಯೋಗ

Public TV
1 Min Read

ಬಾಗಲಕೋಟೆ: ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರ ತಾಯಿ ನಿಧನರಾಗಿದ್ದಾರೆ. ಶ್ರೀಮತಿ ಗುರಬಾಯಿ ಮಹಾದೇವಪ್ಪ ಬಿದರಿ(83) ಬನಹಟ್ಟಿ ಮನೆಯಲ್ಲಿ ನಿಧನರಾಗಿದ್ದಾರೆ.

ಇಂದು ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ತಮ್ಮ ಕುಟುಂಬದವರನ್ನು ಅಗಲಿದ್ದಾರೆ. ಗುರಬಾಯಿ ಮಹಾದೇವಪ್ಪ ಬಿದರಿ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 6 ಜನ ಗಂಡು ಮಕ್ಕಳು ಹಾಗೂ 3 ಜನ ಹೆಣ್ಣು ಮಕ್ಕಳಿದ್ದಾರೆ. ಈ ಎಲ್ಲ ಮಕ್ಕಳಲ್ಲಿ ಶಂಕರ್ ಬಿದರಿ ಅವರು ಹಿರಿಯರಾಗಿದ್ದರು.

ಈಗಾಗಲೇ ತನ್ನ ತಂದೆ ಅವರನ್ನು ಕಳೆದುಕೊಂಡ ಶಂಕರ್ ಬಿದರಿ ಅವರು ಈಗ ತಮ್ಮ ತಾಯಿಯನ್ನು ಕೂಡ ಕಳೆದುಕೊಂಡಿದ್ದಾರೆ. ಇಂದು ಸಂಜೆ 5 ಗಂಟೆಗೆ ಯಲ್ಲಟ್ಟಿ ತೋಟದ ಮನೆಯಲ್ಲಿ ಅಂತ್ಯಸಂಸ್ಕಾರ ನಡೆಸಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *