ಇಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ದರ್ಶನ್‌, ಪವಿತ್ರ ಗೌಡ

Public TV
1 Min Read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ (Renukaswamy Murder Case) ಆರೋಪಿಗಳಾದ ದರ್ಶನ್‌ (Darshan) ಸೇರಿ ಎಲ್ಲಾ 17 ಆರೋಪಿಗಳು ಇಂದು ಮತ್ತೆ ನಗರದ 57ನೇ ಸಿಸಿಹೆಚ್ ಕೋರ್ಟ್​ಗೆ ಹಾಜರಾಗಲಿದ್ದಾರೆ.

ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು (Bail) ಸಿಕ್ಕಿದೆ. ಜಾಮೀನು ಪಡೆದರೂ ಪ್ರತಿ ತಿಂಗಳು ನ್ಯಾಯಾಲಯಕ್ಕೆ (Court) ಹಾಜರಾಗಬೇಕು ಎಂಬ ಷರತ್ತು ಹಿನ್ನೆಲೆಯಲ್ಲಿ ಇಂದು ಎಲ್ಲರೂ ಕೋರ್ಟ್​ಗೆ ಹಾಜರಾಗುತ್ತಿದ್ದಾರೆ. ಇದನ್ನೂ ಓದಿ: ಪತಿ ವಿರುದ್ಧ ಅಕ್ರಮ ಸಂಬಂಧ ಆರೋಪ – ಪತ್ನಿ ನೇಣಿಗೆ ಶರಣು

ಕಳೆದ ಬಾರಿ ವಿಚಾರಣೆ ವೇಳೆ ಪವಿತ್ರಗೌಡಗೆ (Pavithra Gowda) ಕ್ಯಾರೇ ಅನ್ನದೇ ಹೊರಟ್ಟಿದ್ದ ದರ್ಶನ್ ಮತ್ತೆ ಭೇಟಿ ಆಗಿರಲಿಲ್ಲ. ಸಾಕಷ್ಟು ದಿನದ ಬಳಿಕ ಭೇಟಿಗಾಗಿ ಹಾತೊರೆಯುತ್ತಾ ಇದ್ದ ಪವಿತ್ರಗೌಡಗೆ ನಿರಾಸೆ ಆಗಿತ್ತು. ಈಗ ಹಲವು ದಿನಗಳ ನಂತರ ಮತ್ತೆ ದರ್ಶನ್ ಭೇಟಿಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಮಧೂರು ದೇಗುಲದಲ್ಲಿ ಅನುಷ್ಕಾ ಶೆಟ್ಟಿಯಿಂದ ಅಷ್ಟ ದ್ರವ್ಯ ಮಹಾಗಣಪತಿ ಯಾಗ

ಈಗಾಗಲೇ ದೇಶಾದ್ಯಂತ ಸಂಚರಿಸಲು ಅನುಮತಿಯನ್ನು ಪಡೆದಿರುವ ದರ್ಶನ್ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಏಪ್ರಿಲ್‌ 18 ರಂದು ಜಾಮೀನು ಅರ್ಜಿ ವಿಚಾರಣೆ ಇರುವುದರಿಂದ ಇಂದು ವಿಚಾರಣೆಗೆ ತಪ್ಪದೇ ಹಾಜರಾಗಲಿದ್ದಾರೆ.

Share This Article