ಮಕ್ಕಳನ್ನು ನೆನಪಿಸಿಕೊಂಡರೆ ದುಃಖವಾಗುತ್ತೆ : ನಟ ಸುಚೇಂದ್ರ ಪ್ರಸಾದ್

Public TV
1 Min Read

ಟಿ ಪವಿತ್ರಾ ಲೋಕೇಶ್ ಮತ್ತು ನಟ ಸುಚೇಂದ್ರ ಪ್ರಸಾದ್ ಸಹಜೀವನದ ಕುರುಹುವಾಗಿ ಈ ದಂಪತಿಗೆ ಎರಡು ಮಕ್ಕಳು ಇದ್ದಾರೆ. ಈ ಮಕ್ಕಳ ಬಗ್ಗೆ ಪ್ರಥಮ ಬಾರಿಗೆ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ ನಟ ಸುಚೇಂದ್ರ ಪ್ರಸಾದ್. ಆರು ವರ್ಷಗಳಿಂದ ದೂರವೇ ಇರುವ ಈ ಜೋಡಿಯು ಈವರೆಗೂ ಈ ಗುಟ್ಟನ್ನು ಯಾರೊಂದಿಗೆ ಹಂಚಿಕೊಂಡಿರಲಿಲ್ಲ. ಈಗ ಎಲ್ಲವೂ ಬಟಾಬಯಲು ಆದ ಪರಿಣಾಮ ಮಕ್ಕಳ ಮನಸ್ಥಿತಿಯ ಬಗ್ಗೆ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ ಸುಚೇಂದ್ರ ಪ್ರಸಾದ್.

ಈವರೆಗೂ ಪವಿತ್ರಾ ಲೋಕೇಶ್ ಮತ್ತು ಸುಚೇಂದ್ರ ಪ್ರಸಾದ್ ಮದುವೆಯಾಗಿದ್ದಾರೆ ಎಂದು ನಂಬಲಾಗಿತ್ತು. ಮುದ್ದಾದ ಎರಡು ಮಕ್ಕಳು ಇರುವ ಕಾರಣದಿಂದಾಗಿ ಸತಿಪತಿ ನಡುವೆ ಒಳ್ಳೆಯ ಬಾಂಧವ್ಯವಿದೆ ಎಂದೂ ಅಂದುಕೊಳ್ಳಲಾಗಿತ್ತು. ಆದರೆ, ತಮ್ಮ ನಡುವೆ ಯಾವುದೂ ಸರಿಯಿಲ್ಲವೆಂದು ನಿನ್ನೆಯಷ್ಟೇ ಪವಿತ್ರಾ ಲೋಕೇಶ್ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಆರು ವರ್ಷಗಳಿಂದ ತಾವು ದೂರವಿರುವುದಾಗಿಯೂ ತಿಳಿಸಿದರು. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಸುಚೇಂದ್ರ ಪ್ರಸಾದ್ ಆತಂಕ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ ಸುದೀಪ್

ಮಾಧ್ಯಮದೊಂದಿಗೆ ಮಾತನಾಡಿರುವ ಸುಚೇಂದ್ರ ಪ್ರಸಾದ್, ‘ಪವಿತ್ರಾ ಲೋಕೇಶ್ ಅವರ ಭಾವನೆಯನ್ನು ಗೌರವಿಸುತ್ತೇನೆ. ಆದರೆ, ಎರಡು ಮಕ್ಕಳಿವೆ. ಅವುಗಳನ್ನು ನೆನಪಿಸಿಕೊಂಡರೆ ದುಃಖವಾಗುತ್ತದೆ. ಮನಸು ವಿಚಲಿತವಾಗುತ್ತದೆ. ಮಕ್ಕಳ ಕಾರಣದಿಂದಾಗಿಯೂ ಅಂತಹ ನಿರ್ಧಾರ ತಗೆದುಕೊಳ್ಳಬಾರದಿತ್ತು. ಯಾವ ಕಾಲದಲ್ಲಿ ಏನು ನಡೆಯಬೇಕೋ ಅದು ನಡೆಯುತ್ತದೆ. ಆದರೆ, ಮಕ್ಕಳಿಗೆ ಅದರಿಂದ ತೊಂದರೆ ಆಗಬಾರದು ಎಂದು ಮಾತನಾಡಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *