ಸುದೀಪ್ ಹಣ ಪಡೆದಿರುವ ವಿಚಾರ ರವಿಚಂದ್ರನ್ ಅವರಿಗೂ ಗೊತ್ತಿದೆ : ನಿರ್ಮಾಪಕ ಕುಮಾರ್

Public TV
2 Min Read

ಸುದೀಪ್ (Sudeep) ತಮ್ಮಿಂದ ಹಣ ಪಡೆದು ಕಾಲ್ ಶೀಟ್ ನೀಡದೇ ವಂಚಿಸಿದ್ದಾರೆ ಎಂದು ಮೊನ್ನೆಯಷ್ಟೇ ಆರೋಪ ಮಾಡಿದ್ದ ನಿರ್ಮಾಪಕ ಎಮ್.ಎನ್ ಕುಮಾರ್ (M. N. Kumar) ಇದೀಗ ಮತ್ತೆ ಪತ್ರಿಕಾಗೋಷ್ಠಿ ನಡೆಸಿ ಮತ್ತಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕುಮಾರ್ ಅವರಿಗೆ ಸುದೀಪ್ ಮಾನನಷ್ಟ (Defamation) ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಮತ್ತೆ ಸುದೀಪ್ ಮೇಲೆ ಆರೋಪಗಳ ಸುರಿಮಳೆಗೈದಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕುಮಾರ್, ‘ನಾನು ಈ ಬಗ್ಗೆ ಮನೆ ಹತ್ತಿರ ಹೋದರೂ, ಮನೆಯಲ್ಲಿದ್ದರೂ ಸ್ಪಂದಿಸಲಿಲ್ಲ. ಈ ಬಗ್ಗೆ ರವಿಚಂದ್ರನ್ (Ravichandran) ಅವರ ಹತ್ತಿರವು ಮಾತನಾಡಿದ್ದೆ. ಅವರು ಕೂಡ ಸುದೀಪ್ ಗೆ ಹೇಳಿದ್ದಾರೆ. ನಾನು ಹಣ ಕೇಳಿದ್ದೆ ತಪ್ಪಾ? ರವಿಚಂದ್ರನ್ ಅವರ ಜೊತೆ ವಿಶ್ವಾಸದಿಂದ ಇದ್ದಾರೆ. ನನ್ನ ಜೊತೆಯೂ ಚೆನ್ನಾಗಿದ್ದಾರೆ. ಹಾಗಾಗಿ ರವಿಚಂದ್ರನ್ ಬಳಿ ಹೋಗಿಯೂ ಹೇಳಿದ್ದೆ’ ಎಂದರು. ಇದನ್ನೂ ಓದಿ:ನೀಲಿ ತಾರೆ ಮಿಯಾ ತೆಲುಗಿನ ಡೈರೆಕ್ಟರ್ ಆರ್‌ಜಿವಿ

ನಾನು ಯಾರ ಬಳಿಯಾದರೂ ಬಾಕಿ ಉಳಿಸಿಕೊಂಡಿದ್ರೆ ಕರೆದುಕೊಂಡು ಬನ್ನಿ. ಇವತ್ತು ಸುದೀಪ್ ನಮ್ಮನ್ನ ಬಿಟ್ಟು ಹೊರ ರಾಜ್ಯದವರಿಗೆ ಚಿತ್ರ ಮಾಡುತ್ತಿದ್ದೀರಿ. ನಾನು ಕೊಟ್ಟಿರೋದನ್ನ ಕೊಟ್ಟು ಬೇರೆ ಯಾರಿಗಾದ್ರು ಹೋಗಿ ಚಿತ್ರ ಮಾಡಿಕೊಡಿ. ಈ ಹಿಂದೆ ಅವರ ಮೇಲೆ ಇದ್ದ ಅಭಿಮಾನಕ್ಕೆ ಕಮಿಷನ್ ಇಲ್ಲದೆ ಚಿತ್ರ ಹಂಚಿಕೆ ಮಾಡಿದ್ದೇವೆ. ಇದೇ ಚಿತ್ರದ ಎದುರು ತಮ್ಮ ಆಟೋಗ್ರಾಫ್ ಸಿನಿಮಾ ರಿಲೀಸ್ ಆಗಬೇಕು ಅಂತ ಹಠ ಮಾಡಿದರು. ಅದನ್ನೂ ಮಾಡಿದ್ದೇನೆ. ಅವರಿಗಾಗಿ ಎಷ್ಟೆಲ್ಲ ಸಹಾಯ ಮಾಡಿದರೂ, ಕೊನೆಗೆ ನನಗೆ ಹೀಗಾಯಿತು ಎಂದರು ಕುಮಾರ್.

ಈ ಪ್ರಕರಣವನ್ನು ನಾನು ಇಂಡಸ್ಟ್ರಿ ಮೂಲಕವೇ ಬಗೆಹರಿಸಿಕೊಳ್ಳಲ್ಲು ರೆಡಿ‌ಇದ್ದೇನೆ. ನಮ್ಮ ಸಂಸ್ಥೆಗಳ ತೀರ್ಮಾನಕ್ಕೆ ನಾನು ರೆಡಿ ಇದ್ದೇನೆ. ಇಷ್ಟೆಲ್ಲ ಆದ ಮೇಲೆಯೂ ಕಾಲ್ ಶೀಟ್ ಕೊಟ್ಟರೆ ನಾನು ಅವರಿಗೆ ಚಿತ್ರ ಮಾಡ್ತೇನೆ. ಸುದೀಪ್ ಅವರು ಬಹಿರಂಗ ಸಭೆ ಮುಂದೆ ಯಾಕೆ ಬರುತ್ತಿಲ್ಲ. ನಾನು ತಪ್ಪು ಮಾಡಿದ್ರೆ ಕಾಲು ಹಿಡಿದು ಕ್ಷಮೆ ಕೇಳ್ತೇನೆ ಎನ್ನುವುದು ಕುಮಾರ್ ಮಾತು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್