ಒಂದೇ ತಿಂಗಳಲ್ಲಿ 3 ಸಾವು – ಸೂತಕ ಛಾಯೆಯಲ್ಲಿ ರವಿ ಕುಟುಂಬ

Public TV
1 Min Read

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ಬಳಿಯ ಮರಿಯಮ್ಮನಹಳ್ಳಿ ವಿಐಪಿ ಮಗನ ಕಾರು ಅಪಘಾತ ಪ್ರಕರಣದ ಘಟನೆಯಲ್ಲಿ ರವಿನಾಯಕ್ ಮೃತಪಟ್ಟಿದ್ದನು. ಆದರೆ ರವಿನಾಯಕ್ ಸಾವಿಗೀಡಾದ 10 ದಿನದಲ್ಲೇ ಆತನ ಅಜ್ಜಿ ಕೂಡ ಸಾವನ್ನಪ್ಪಿದ್ದಾರೆ.

ಕೊಟ್ರಿಬಾಯಿ (65) ಮೃತ ರವಿ ಅಜ್ಜಿ. ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಫೆಬ್ರವರಿ 10 ರಂದು ರವಿ ನಾಯಕ್ ಸಾವಿನ ನಂತರ ಅಜ್ಜಿ ಕೊಟ್ರಿಬಾಯಿ ಹಾಸಿಗೆ ಹಿಡಿದಿದ್ದರು. ಕೊನೆಗೆ ಮೊಮ್ಮಗನ ದುಃಖದಲ್ಲಿ ಕೊರಗಿ ಕೊರಗಿ ಕಳೆದ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಕಾರು ಅಪಘಾತ ಮಾಡಿದ್ದ ಆರೋಪಿ ಅರೆಸ್ಟ್ – ನ್ಯಾಯಾಲಯದಿಂದ ಜಾಮೀನು

ಒಂದು ತಿಂಗಳ ಹಿಂದೆ ಮಂಜುನಾಯಕ್ (24) ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದ. 15 ದಿನದ ನಂತರ 16 ವರ್ಷದ ರವಿನಾಯಕ್ ಕೂಡ ಕಾರು ಅಪಘಾತದಲ್ಲಿ ಮೃತಪಟ್ಟಿದ್ದನು. ಹೀಗಾಗಿ ಒಂದೇ ಕುಟುಂಬದಲ್ಲಿ 1 ತಿಂಗಳ ಅವಧಿಯಲ್ಲಿ ಮೂರು ಜನ ಸಾವಿಗೀಡಾಗಿದ್ದಾರೆ. ಸಾವಿನ ಮೇಲೆ ಸಾವು ಕಂಡು ರವಿ ನಾಯಕ್ ಕುಟುಂಬ ಆತಂಕಕ್ಕೆ ಒಳಗಾಗಿದ್ದಾರೆ. ಮನೆಯಲ್ಲಿ ಆಕ್ರಂದ ಮುಗಿಲು ಮುಟ್ಟಿದೆ.

ಆಕಾಶ ತಲೆಯ ಮೇಲೆ ಬಿದ್ದಾಂಗಿದೆ ಎನ್ನುತ್ತಾರೆ ಕುಟುಂಬದವರು. ರವಿ ನಾಯಕ್ ಮನೆಯಲ್ಲಿ ಸಾವಿನ ಮೇಲೆ ಸಾವನ್ನು ಕಂಡು ಕುಟುಂಬದವರು ಆತಂಕಗೊಂಡು ಸ್ವಂತ ಮನೆ ಬಿಟ್ಟು ಬೇರೆ ಮನೆಯಲ್ಲಿ ವಾಸಮಾಡಿದ್ದಾರೆ. ಮನೆಯ ಸದಸ್ಯರು ಸೂತಕದ ಛಾಯೆಯಲ್ಲಿ ಜೀವನ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *