ಸಿಸಿಬಿ ಮುಂದೆ 7 ಶಾರ್ಪ್ ಶೂಟರ್ ಗಳ ಬಗ್ಗೆ ಬಾಯ್ಬಿಟ್ಟ ತಾಹಿರ್

Public TV
1 Min Read

ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆ ಮಾಡಲು ರವಿ ಬೆಳಗೆರೆ ಸುಪಾರಿ ನೀಡಿದ ಕುರಿತು ಶಶಿಧರ್ ಮುಂಡೇವಾಡ ಬಾಯ್ಬಿಟ್ಟ ನಂತರ ಸಿಸಿಬಿ ಅಧಿಕಾರಿಗಳು ವೆಪನ್ ಸಪ್ಲೈಯರ್ ತಾಹಿರ್ ನಿಂದ ಮತ್ತಷ್ಟು ಮಾಹಿತಿ ಕಲೆ ಹಾಕಿದ್ದಾರೆ.

ಅಲ್ಲದೇ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ಮಹಾರಾಷ್ಟ್ರದ ಏಳು ಶಾರ್ಪ್ ಶೂಟರ್ ಗಳ ಬಗ್ಗೆ ತಾಹಿರ್ ಮಾಹಿತಿ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತನಿಖೆ ವೇಳೆ ಸಿಸಿಬಿ ಮುಂದೆ ಹೇಳಿಕೆ ನೀಡಿರೋ ತಾಹೀರ್ ನಾನು ಶಾರ್ಪ್ ಶೂಟರ್ ಗಳಿಗೆ ರಿವಲ್ವಾರ್ ಸಪ್ಲೈ ಮಾಡುತ್ತೇನೆ. ಆದರೆ ಯಾರು ಯಾರನ್ನು ಕೊಲೆ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಸಾಕಷ್ಟು ಜನರು ನನ್ನ ಬಳಿ ರಿವಲ್ವಾರ್ ಪಡೆದು ಹಣ ನೀಡಿದ್ದಾರೆ ಎಂದು ಹೇಳಿದ್ದಾನೆ.

ಬೆಲೆ ಎಷ್ಟು?: ನನ್ನ ಬಳಿಯೇ ಬಂದು ರಿವಲ್ವಾರ್ ಪಡೆದರೆ 15 ಸಾವಿರ ರೂ. ನಾನೇ ರಿವಾಲ್ವರ್ ತಗೆದುಕೊಂಡು ಹೋದರೆ 30 ರಿಂದ 50 ಸಾವಿರ ರೂ. ಹಣ ಪಡೆದುಕೊಳ್ಳುತ್ತೇನೆ ಎಂಬ ಮಾಹಿತಿಯನ್ನು ನೀಡಿದ್ದಾನೆ. ತಾಹಿರ್ ನೀಡಿರುವ ಮಾಹಿತಿ ಆಧಾರಿಸಿ ಒಂದು ದಿನದ ಹಿಂದೆಯೇ ಮಹಾರಾಷ್ಟ್ರಕ್ಕೆ ತೆರಳಿರುವ ಎಸ್‍ಐಟಿ ತಂಡ ಅಲ್ಲಿಯೇ ಬಿಡು ಬಿಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.

https://www.youtube.com/watch?v=86k-IW3-boE

https://www.youtube.com/watch?v=lgEoaxQ1l44

https://www.youtube.com/watch?v=tvAkOpM6ZZo

Share This Article
Leave a Comment

Leave a Reply

Your email address will not be published. Required fields are marked *