ಬಳ್ಳಾರಿಯಲ್ಲಿ ಗುರು ಸಿದ್ದರಾಮೇಶ್ವರ ಮಠದ ಮಹಾರಥೋತ್ಸವ

Public TV
0 Min Read

ಬಳ್ಳಾರಿ : ಸಂಡೂರು ತಾಲೂಕಿನ ಯಶವಂತನಗರದ ಗುರು ಸಿದ್ದರಾಮೇಶ್ವರ ಮಹಾಶಿವಯೋಗಿಗಳ ರಥೋತ್ಸವ ಅದ್ಧೂರಿಯಾಗಿ ಸಂಭ್ರಮ ಸಡಗರದಿಂದ ಜರುಗಿತು.

ಯಶವಂತನಗರದ ಸಿದ್ದರಾಮೇಶ್ವರ ಮಠದ ಮಹಾರಥೋತ್ಸವ ಪ್ರತಿ ವರ್ಷ ಜ್ಯೇಷ್ಠ ಶುದ್ಧ ದಶಮಿಯಂದು ಅದ್ದೂರಿಯಾಗಿ ಜರುಗುತ್ತದೆ. ಮೈಸೂರು ಸಂಸ್ಥಾನ ಮಠಕ್ಕೆ ಸುತ್ತೂರ ಮಠ ಹೇಗೆ ಪರಂಪರೆಯಾಗಿದೆಯೋ ಯಶವಂತನಗರದ ಈ ಗುರುಸಿದ್ದರಾಮೇಶ್ವರ ಮಠ ಸಹ ಸಂಡೂರು ಮಹಾರಾಜರ ಪರಂಪರೆಯಾಗಿ ನಡೆದುಕೊಂಡು ಬಂದಿದೆ.

ಸಿದ್ದರಾಮೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ನಾಡಿನ ಸಾವಿರಾರು ಭಕ್ತರು ಪಾಲ್ಗೊಂಡು ರಥವನ್ನು ಎಳೆದರು. ಈ ರಥೋತ್ಸವದಲ್ಲಿ ಜಾತಿ ಮತ ಮರೆತು ಎಲ್ಲ ಸಮಾಜದ ಬಾಂಧವರು ಒಂದಾಗಿ ಪಾಲ್ಗೊಳ್ಳುವುದು ಮತ್ತೊಂದು ವಿಶೇಷವಾಗಿದೆ.

 

 

Share This Article
Leave a Comment

Leave a Reply

Your email address will not be published. Required fields are marked *