ರಶ್ಮಿಕಾ ಮಂದಣ್ಣ ನನ್ನ ಬಾಡಿಗಾರ್ಡ್ ಆಗಿದ್ದರು: ನಾಗಾರ್ಜುನ

Public TV
1 Min Read

ಹೈದರಾಬಾದ್: ರಶ್ಮಿಕಾ ಮಂದಣ್ಣ ನನಗೆ ಬಾಡಿಗಾರ್ಡ್ ಆಗಿದ್ದರು ಎಂದು ಟಾಲಿವುಡ್ ಸೂಪರ್ ಸ್ಟಾರ್ ನಾಗಾರ್ಜುನ ಹೇಳಿದ್ದಾರೆ.

ಗುರುವಾರ ಸಂಜೆ ರಶ್ಮಿಕಾ ಮಂದಣ್ಣ, ನಾನಿ ಹಾಗೂ ನಾಗುರ್ಜನ ಅವರು ಅಭಿನಯಿಸಿದ ‘ದೇವದಾಸ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಚಿತ್ರದ ಕಲಾವಿದರ ಜೊತೆ ಸಮಂತಾ, ಸುಶಾಂತ್, ಅಖಿಲ್ ಹಾಗೂ ಅಮಲಾ ಅಕ್ಕಿನೇನಿ ಕೂಡ ಭಾಗಿಯಾಗಿದ್ದರು.

ಈ ಕಾರ್ಯಕ್ರಮದಲ್ಲಿ ಚಿತ್ರದ ನಾಯಕರಾದ ನಾಗರ್ಜುನ ಹಾಗೂ ನಾನಿ ರಶ್ಮಿಕಾ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ತೆಲುಗು ಪ್ರೇಕ್ಷಕರಿಗೆ ರಶ್ಮಿಕಾ ಮಂದಣ್ಣ ಏಕೆ ಇಷ್ಟವಾಗುತ್ತಾರೆ ಎಂಬುದನ್ನು ಕಾರ್ಯಕ್ರಮದಲ್ಲಿ ಎಲ್ಲರ ಸಮ್ಮುಖದಲ್ಲಿ ಹೇಳಿದರು.

ಚಿತ್ರದ ಚಿತ್ರೀಕರಣ ಮುಗಿಸಿ ನಾವು ಥೈಲ್ಯಾಂಡ್‍ನಿಂದ ವಾಪಸ್ ಬರುತ್ತಿದ್ದಾಗ ರಶ್ಮಿಕಾ ನನ್ನ ಪಕ್ಕದಲ್ಲೇ ಕುಳಿತುಕೊಂಡಿದ್ದರು. ಮೂರು ಗಂಟೆಯ ಪ್ರಯಾಣದಲ್ಲಿ ರಶ್ಮಿಕಾ ನಿರಂತರವಾಗಿ ನನ್ನನ್ನು ನಗಿಸುತ್ತಲ್ಲೇ ಇದ್ದರು. ಅಲ್ಲದೇ ರಶ್ಮಿಕಾ ನನಗೆ ಬಾಡಿಗಾರ್ಡ್ ಆಗಿ ಕೂಡ ಇದ್ದರು. ಫ್ಲೈಟ್‍ನಲ್ಲಿ ರಾತ್ರಿ ಹೊತ್ತು ನಮ್ಮ ಹಿಂದೆ ಕುಳಿತ್ತಿದ್ದವರು ಕುಡಿದ ನಶೆಯಲ್ಲಿ ಗಲಾಟೆ ಮಾಡುತ್ತಿದ್ದಾರೆ. ಆಗ ರಶ್ಮಿಕಾ ನನ್ನನ್ನು ರಕ್ಷಿಸಲು ಅವರ ಮೇಲೆ ಕೈ ಕೂಡ ಮಾಡಿದರು ಎಂದು ಹೇಳಿದರು.

ಸದ್ಯ ‘ಚಲೋ’ ಹಾಗೂ ‘ಗೀತಾ ಗೋವಿಂದಂ’ ಚಿತ್ರದ ನಂತರ ದೇವದಾಸ್ ಚಿತ್ರ ರಶ್ಮಿಕಾಗೆ ಹ್ಯಾಟ್ರಿಕ್ ಗೆಲವು ಸಿಗಲಿದೆ. ರಶ್ಮಿಕಾ ದಕ್ಷಿಣ ಭಾರತದ ಟಾಪ್ ಹೀರೋಯಿನ್ ಆಗುವುದರಲ್ಲಿ ಯಾವುದೇ ಅನುಮಾವಿಲ್ಲ ಎಂದು ನಾಗಾರ್ಜುನ್ ಕಾರ್ಯಕ್ರಮದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ನಟ ನಾನಿ ಕೂಡ ರಶ್ಮಿಕಾ ಬಗ್ಗೆ ಮಾತನಾಡಿದರು. ರಶ್ಮಿಕಾ ಅವರ ಜೊತೆ ಕೆಲಸ ಮಾಡಿದ್ದು ನಿಜಕ್ಕೂ ಪಾಸಿಟೀವ್ ಎನರ್ಜಿ. ಅವರು ಸಿನಿಮಾ ಸೆಟ್‍ನಲ್ಲಿ ಯಾವಾಗಲೂ ನಗುತ್ತಿರುತ್ತಾರೆ. ಅವರು ಚಿತ್ರದ ಸೆಟ್‍ನಲ್ಲಿ ಇದ್ದಾರೆ ಎಂದರೆ ಅಲ್ಲಿ ಎಲ್ಲರು ಖುಷಿಯಾಗಿರುತ್ತಾರೆ ಎಂದು ನಟ ನಾನಿ ರಶ್ಮಿಕಾ ಅವರ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿದರು.

ಸದ್ಯ ದೇವದಾಸ್ ಚಿತ್ರ ಇದೇ ತಿಂಗಳು ಸೆಪ್ಟೆಂಬರ್ 27ರಂದು ಬಿಡುಗಡೆಯಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *