ಪುನೀತ್ ಅಗಲಿಕೆಯ ಶೋಕ ನಿರಂತರವಾಗಿರುತ್ತದೆ: ರಂಗಾಯಣ ರಘು

Public TV
1 Min Read

ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರಿಗೆ 11 ದಿನದ ಕಾರ್ಯವನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಈ ವೇಳೆ ಕಡ್ಡಿಪುಡಿ ಚಂದ್ರು, ರಂಗಾಯಣ ರಘು, ರವಿಶಂಕರ್ ಗೌಡ ಅವರ ಅಪ್ಪು ಸಮಾಧಿಯ ದರ್ಶನವನ್ನು ಪಡೆದುಕೊಂಡಿದ್ದಾರೆ. ಸಮಾಧಿಗೆ ಭೇಟಿ ಕೊಟ್ಟು ಪೂಜಿಸಿ, ಸ್ವಲ್ಪ ಸಮಯ ಇಲ್ಲೇ ಕುಳಿತ ನಟರು ಅಪ್ಪು ನೆನಪುಗಳನ್ನು ಮಾಧ್ಯಮದವರ ಜೊತೆಗೆ ಮೆಲಕು ಹಾಕಿದ್ದಾರೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ನಟರಾದ ರಂಗಾಯಣ ರಘು , ರವಿಶಂಕರ್ ಗೌಡ , ಕಡ್ಡಿಪುಡಿ ಚಂದ್ರು ಅಪ್ಪು ಜೊತೆಗೆ ಇರುವ ಬಾಂಧವ್ಯ ಮತ್ತು ಅವರೊಂದಿಗೆ ಇರುವ ಒಡನಾಟವನ್ನು ನೆನೆದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮಾಡ್ಕೊಂಡ ಅಪ್ಪು ಅಭಿಮಾನಿ ಮನೆಗೆ ರಾಘಣ್ಣ ಭೇಟಿ, ಸಾಂತ್ವನ

ಪುನೀತ್ ಅಗಲಿಕೆಯ ಶೋಕ ನಿರಂತರವಾಗಿರುತ್ತದೆ. ಕುಟುಂಬವನ್ನ ದೇವರೇ ಕಾಪಾಡಬೇಕು. ಅಶ್ವಿನಿಯವರ ದುಃಖ ನೋಡಿದರೆ ತುಂಬಾ ಕಷ್ಟ ಆಗುತ್ತದೆ ರಂಗಾಯಣ ರಘು ಎಂದು ಹೇಳುತ್ತಾ ದುಃಖಿತರಾಗಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲ ಥಿಯೇಟರ್‌‌ಗಳಲ್ಲಿ ಏಕಕಾಲಕ್ಕೆ ಅಪ್ಪುಗೆ ಶ್ರದ್ಧಾಂಜಲಿ

Puneeth Rajkumar

ಕಡ್ಡಿಪುಡಿ ಚಂದ್ರು ಮಾತನಾಡಿ, ನನಗೆ ಅಪ್ಪು ಜೊತೆ ಸಿನಿಮಾ ಹೊರತಾಗಿಯೂ ಕುಟುಂಬದ ಜೊತೆಗೆ ಬಹಳ ನಂಟಿದೆ. ಎಂಥಾ ಅದ್ಭುತ ಕಲಾವಿದನನ್ನ ನಾವು ಕಳೆದುಕೊಂಡುಬಿಟ್ವಿ. ಅವರೊಂದಿಗೆ ಕಳೆದಿರುವ ಸಾಕಷ್ಟು ನೆನಪುಗಳಿವೆ ಎಂದು ಹೇಳುತ್ತಾ ಕಣ್ಣಂಚಲಿ ನೀರು ತುಂಬಿಕೊಂಡಿದ್ದಾರೆ.

ನಾನು ಅವರೊಂದಿಗೆ ಕಳೆದ ನೆನಪುಗಳಿಗೆ ಲೆಕ್ಕವಿಲ್ಲ. ನಾನು ಅವರನ್ನು ಚಿಕ್ಕಯಜಮಾನ್ರೆ ಎಂದು ಕರೆಯುತ್ತಿದೆ. ಅವರು ಗುಣಗಾನ ಮಾತಲ್ಲಿ ಹೇಳಲಾಗುವುದಿಲ್ಲ ಎಂದು ರವಿಶಂಕರ್ ಗೌಡ ಹೇಳಿ ಅಪ್ಪು ಅವರನ್ನುಕಳೆದು ಕೊಂಡಿರುವ ಬೇಸರವನ್ನು ತೋಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *