ಬಿಜೆಪಿಗೆ ಮತ ಹಾಕಿ ಸರ್- ಕೆ.ಬಿ.ಕೋಳಿವಾಡಗೆ ಕಮಲ ಅಭ್ಯರ್ಥಿ ಪತ್ನಿ ಮನವಿ

Public TV
1 Min Read

ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ಹಾಗೂ ಹಿರೇಕೆರೂರು ಎರಡೂ ಕ್ಷೇತ್ರಗಳಲ್ಲಿ ಉಪ ಚುನಾವಣೆ ಕಾವು ಜೋರಾಗಿದೆ. ಅದರಲ್ಲೂ ವಾಣಿಜ್ಯ ನಗರಿ ರಾಣೇಬೆನ್ನೂರಿನಲ್ಲಿ ಪ್ರಚಾರ ಭಾರೀ ರಂಗು ಪಡೆದಿದೆ.

ಬಿಜೆಪಿಗೆ ಮತ ಹಾಕುವಂತೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಅವರಿಗೆ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಅವರ ಪತ್ನಿ ಕೇಳಿದ ಪ್ರಸಂಗ ಇಂದು ಕರೂರು ಗ್ರಾಮದಲ್ಲಿ ನಡೆದಿದೆ. ಕೆ.ಬಿ.ಕೋಳಿವಾಡ್ ಅವರು ಕರೂರು ಗ್ರಾಮದಲ್ಲಿ ಪ್ರಚಾರ ಮುಗಿಸಿ ರಾಣೇಬೆನ್ನೂರಿಗೆ ಮರಳುತ್ತಿದ್ದರು. ಈ ವೇಳೆ ಗ್ರಾಮಕ್ಕೆ ಆಗಮಿಸಿದ ಅರುಣಕುಮಾರ ಅವರ ಪತ್ನಿ, ಜಿಲ್ಲಾಪಂಚಾಯತಿ ಸದಸ್ಯೆ ಮಂಗಳಗೌರಿ ಅವರು, ಕೆ.ಬಿ.ಕೋಳಿವಾಡ ಅವರನ್ನು ಮಾತನಾಡಿಸಿ, ಬಿಜೆಪಿಗೆ ಮತ ಹಾಕಿ ಸರ್ ಎಂದು ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲಾಪಂಚಾಯತಿ ಸದಸ್ಯೆ ಮಂಗಳಗೌರಿ ಅವರ ಮನವಿಯ ಬಳಿಕ, ಕೆ.ಬಿ.ಕೋಳಿವಾಡ ಅವರು ನಗುತ್ತಲೇ ಮುಂದೆ ಸಾಗಿದರು. ಬಳಿಕ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಹಾಗೂ ಬಿಜೆಪಿ ಮುಖಂಡರು ಕರೂರು ಗ್ರಾಮದಲ್ಲಿ ಭರ್ಜರಿ ಪ್ರಚಾರ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *