ಬಿಜೆಪಿ ರಾಕ್ಷಸರ ಸರ್ಕಾರವಾಗಿದೆ: ಸುರ್ಜೇವಾಲಾ

Public TV
1 Min Read

ಗದಗ: ಬಿಜೆಪಿ ರಾಕ್ಷಸರ ಸರ್ಕಾರವಾಗಿದೆ. ಕೊಲೆ ಮಾಡಿ ಎಂದು ಹೇಳುವ, ಕಮಿಷನ್ ಕೇಳುವ ಸರ್ಕಾರವಿದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Surjewala) ಹೇಳಿದರು.

ನಗರದ ಕೆ.ಎಚ್ ಪಾಟೀಲ್‌ ಸಭಾ ಭವನದಲ್ಲಿ ನಡೆದ ಕಾಂಗ್ರೆಸ್ (Congress) ಪಕ್ಷದಿಂದ ಗೃಹ ಜ್ಯೋತಿ, ಗೃಹ ಲಕ್ಷ್ಮಿ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮ ವೇಳೆ ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯವರ ಬುದ್ಧಿ, ವಿಚಾರಧಾರೆಗಳು, ಚಿಂತನೆ ಹಾಗೂ ದೃಷ್ಟಿಕೋನ ರಾಕ್ಷಸರಂತಿವೆ. ಇದು ಕಮಿಷನ್ ಸರ್ಕಾರ ಎಂದು ಗದಗ ಜಿಲ್ಲೆಯ ದಿಂಗಾಲೇಶ್ವರ ಸ್ವಾಮಿಯೇ ಬಹಿರಂಗವಾಗಿಯೇ ಹೇಳಿದ್ದಾರೆ. 40%ನಲ್ಲಿ ಮಠ ಮಾನ್ಯಗಳಿಗೆ 10% ಡಿಸ್ಕೌಂಟ್ ಕೊಡುತ್ತಾರೆ. ಅಲ್ಲೂ 30% ಕೇಳ್ತಾರೆ. ಮಂದಿರ, ಮಸೀದಿ, ಮಠಗಳಿಗೂ ಪರ್ಸೆಂಟೆಜ್ ಬಿಡುತ್ತಿಲ್ಲ. ಬಿಜೆಪಿಯರಿಗೆ ನರಕದಲ್ಲಿಯೂ ಜಾಗ ಸಿಗುವುದಿಲ್ಲ. ಅವರಿಗೆ ಪ್ರತ್ಯೇಕ ಜಾಗವೇ ಬೇಕು. 40% ಕಮಿಷನ್‌ನಿಂದಾಗಿ ಹಲವಾರು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಪ್ರಧಾನಿ ನರೇಂದ್ರ ಮೋದಿ ಅವರು ತುಟಿ ಪಿಟಕ್ ಅಂತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಓಲಾದಿಂದ 7,614 ಕೋಟಿ ಹೂಡಿಕೆ- ಸಿಎಂ ಸ್ಟಾಲಿನ್‌ ಸಹಿ

ಸಿದ್ದರಾಮಯ್ಯ ಮುಗಿಸಿ ಎಂಬ ಅಶ್ವತ್ಥ್ ನಾರಾಯಣ್‌ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇಂತಹ ಹಿಂಸಾತ್ಮಕ ಮಾತುಗಳಿಂದ ಗಾಂಧೀಜಿ, ಇಂಧಿರಾ ಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಅನೇಕರ ಹತ್ಯೆ ಆಯಿತು. ಇದಕ್ಕೆಲ್ಲ ಕಾಂಗ್ರೆಸ್ ಹೆದರುವುದಿಲ್ಲ. ಬಡವರ ಪರವಾಗಿ ಕೆಲಸ ಮಾಡುವ ನಮ್ಮ ತತ್ವ ಸಿದ್ಧಾಂತಗಳನ್ನು ಸಾಯಿಸಲು ಸಾಧ್ಯವಿಲ್ಲ. ಸಿ.ಪಿ ಯೋಗೇಶ್ವರ್‌ ಅವರು, ಅಮಿತ್ ಶಾರನ್ನು ರೌಡಿ ಎಂದು ಆರೋಪ ಮಾಡುತ್ತಾರೆ. ಯೋಗೇಶ್ವರ ಆರೋಪ ಸುಳ್ಳಾದರೇ ಅವರ ಮೇಲೆ ಏಕೆ ಕ್ರಮವಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪೊಲೀಸ್ ನೇಮಕಾತಿಗಾಗಿ 1,600 ಮೀ. ಓಟ ಓಡುತ್ತಿದ್ದಾಗ ತಲೆ ತಿರುಗಿ ಬಿದ್ದು ಯುವಕ ಸಾವು

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *