ಶಿರೂರು ಮೂಲ ಮಠದಲ್ಲಿ ಸಿಕ್ಕಿದ್ದು ಪಾಯ್ಸನ್ ಅಲ್ಲ, ಜ್ಯೂಸ್ ಬಾಟಲ್!

Public TV
1 Min Read

ಉಡುಪಿ: ಇಲ್ಲಿನ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಅನುಮಾನಾಸ್ಪದ ಸಾವು ಪ್ರಕರಣ ದಿನೇ ದಿನೇ ತಿರುವು ಪಡೆದುಕೊಳ್ಳುತ್ತಲೇ ಇದ್ದು, ಶಿರೂರು ಮೂಲ ಮಠದಲ್ಲಿ ಸಿಕ್ಕಿದ ಬಾಟಲಿಯೊಂದು ಇದೀಗ ಸಾಕಷ್ಟು ಸುದ್ದಿ ಮಾಡುತ್ತಿದೆ.

ಮಠದಲ್ಲಿ ಸಿಕ್ಕಿರುವ ಬಾಟಲಿಯಲ್ಲಿ ವಿಷವಿತ್ತು ಎಂಬ ವದಂತಿಗಳು ಈಗ ಹರಿದಾಡುತ್ತಿದ್ದು, ಬಾಟಲಿಯಲ್ಲಿದ್ದ ದ್ರವವನ್ನು ಗೋಡಂಬಿ ಜ್ಯೂಸ್ ಎಂದೂ ಸ್ವಾಮೀಜಿಯ ಆಪ್ತ ಮಹಿಳೆ ಕುಡಿಸಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಈ ಬಾಟಲಿ Morinzhi ಎಂಬ ಹೆಸರಿನ ಡ್ರಿಂಕ್ ಆಗಿದ್ದು, ಪೊಲೀಸರು ಸದ್ಯ ಈ ಬಾಟಲಿಯನ್ನು ವಶಕ್ಕೆ ಪಡೆದಿದ್ದಾರೆ.

ಮೊರಿಜೈನ್ ಆರೋಗ್ಯ ವೃದ್ಧಿ ಪಾನೀಯವಾಗಿದ್ದು, ಇದನ್ನೇ ವಿಷದ ಬಾಟಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸಲಾಗುತ್ತಿದೆ. ವಾಸ್ತವದಲ್ಲಿ ಆ ಹೆಸರಿನ ಶಕ್ತಿವರ್ಧಕ ಪಾನೀಯ ಲಭ್ಯವಿದ್ದು, ಸ್ವಾಮೀಜಿ ತಮ್ಮ ಆಪ್ತ ಮಹಿಳೆಯಿಂದ ತರಿಸಿಕೊಂಡು ಈ ಪಾನೀಯ ಕುಡಿಯುತ್ತಿದ್ರಾ? ಅಥವಾ ಮಹಿಳೆಯೇ ತಂದು ಕುಡಿಸಿದ್ರಾ? ಎಂಬ ಶಂಕೆಯ ಹಿನ್ನೆಲೆಯಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಿರೂರು ಸ್ವಾಮೀಜಿ ಆಪ್ತರು ನೀಡಿರುವ ಮಾಹಿತಿ ಪ್ರಕಾರ, ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೂ ಈ ಮಹಿಳೆ ಬಂದಿರಲಿಲ್ಲ. ಅನಾರೋಗ್ಯಕ್ಕೀಡಾದಾಗಲೂ ಆಸ್ಪತ್ರೆಗೆ ಬಂದಿರಲಿಲ್ಲ. ಹಾಗಾದ್ರೆ ಸ್ವಾಮೀಜಿ ಜೊತೆ ಕೊನೆಗಳಿಗೆಯಲ್ಲಿ ಆಪ್ತೆ ಎನಿಸಿಕೊಂಡಿದ್ದ ಮಹಿಳೆ ಮುನಿಸಿಕೊಂಡಿರಬಹುದೇ ಎಂಬ ಸಂಶಯ ವ್ಯಕ್ತವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *