ಮಂಡ್ಯದಲ್ಲಿನ ‘ರಮ್ಯಾ ಕ್ಯಾಂಟೀನ್’ ಬಗ್ಗೆ ತಿಳಿದು ದೆಹಲಿಯಲ್ಲಿರೋ ರಮ್ಯಾ ಹೀಗಂದ್ರು

Public TV
1 Min Read

ಮಂಡ್ಯ: ಮಾಜಿ ಸಂಸದೆ ರಮ್ಯಾ ಅಭಿಮಾನಿಯೊಬ್ಬರು ಜಿಲ್ಲೆಯಲ್ಲಿ ಡಿಸೆಂಬರ್ 3 ರಂದು ಭಾನುವಾರ ರಮ್ಯಾ ಕ್ಯಾಂಟಿನ್ ತೆರೆದಿದ್ದರು. ಇದರ ಬಗ್ಗೆ ಸ್ವತ ರಮ್ಯಾ ಅವರೇ ಟ್ವಟಿರ್ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ರಘು ಎಂಬ ಅಭಿಮಾನಿಯೊಬ್ಬರು ಕಳೆದ 15 ವರ್ಷಗಳಿಂದ ಮಂಡ್ಯದಲ್ಲಿ ರಸ್ತೆ ಬದಿ ಕ್ಯಾಂಟೀನ್ ನಡೆಸುತ್ತಿದ್ದರು. ಆದರೆ ಅದನ್ನೇ ಹೊಸದಾಗಿ ರಮ್ಯಾ ಹೆಸರಿನಲ್ಲಿ ಕ್ಯಾಂಟೀನ್ ಆರಂಭಿಸಿದ್ದರು. ಅವರು ಸಂಸದರಾಗಿದ್ದಾಗ ಒಳ್ಳೆಯ ಕೆಲಸ ಮಾಡಿದ್ದಾರೆ. ಹಳ್ಳಿ ಹಳ್ಳಿಗೆ ಭೇಟಿ ಮಾಡಿ ಜನರ ಕಷ್ಟ ಆಲಿಸಿದ್ದಾರೆ. ಹಾಗಾಗಿ ಅವರ ಹೆಸರಲ್ಲೇ ಒಂದು ಕ್ಯಾಂಟೀನ್ ಆರಂಭಿಸಲು ತೀರ್ಮಾನಿಸಿದ್ದಾಗಿ ಹೇಳಿದ್ದಾರೆ. ಜಿಲ್ಲೆಯ ಅಶೋಕ ನಗರದ ತ್ರಿವೇಣಿ ರಸ್ತೆಯಲ್ಲಿ ಕ್ಯಾಂಟೀನ್ ಆರಂಭಿಸಿದ್ದಾರೆ. ಈ ಕ್ಯಾಂಟೀನ್‍ನಲ್ಲಿ ಕೇವಲ ಹತ್ತು ರೂಪಾಯಿಗೆ ಊಟ, ತಿಂಡಿಯನ್ನು ನೀಡುತ್ತಿದ್ದಾರೆ.

ರಮ್ಯಾ ಕ್ಯಾಂಟೀನ್ ಆರಂಭದ ಸುದ್ದಿಯನ್ನು ದೆಹಲಿಯಲಿದ್ದ ರಮ್ಯಾ ತಿಳಿದು, “ಕ್ಯಾಂಟೀನ್‍ಗೆ ನಾನು ಒಮ್ಮೆ ಭೇಟಿ ನೀಡಿ ಊಟ ಮಾಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಈ ರಮ್ಯಾ ಕ್ಯಾಂಟೀನ್ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸಮೀಪದಲ್ಲೇ ಇದ್ದು, ಜಿಲ್ಲೆಯ ಎಲ್ಲ ತಾಲೂಕುಗಳಿಂದ ಜನ ಆಸ್ಪತ್ರೆಗೆ ಬರುತ್ತಾರೆ. ಅವರಲ್ಲಿ ಹಲವರ ಬಳಿ ಹೆಚ್ಚು ಹಣವಿರುವುದಿಲ್ಲ. ಅಂತಹವರಿಗೆ ರಮ್ಯಾ ಕ್ಯಾಂಟೀನ್ ನಿಂದ ತುಂಬಾ ಅನುಕೂಲವಾಗುತ್ತಿದೆ  ಎಂದು ಸಾರ್ವಜನಿಕರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *