ʻಅಮೃತಧಾರೆʼ ಶೂಟಿಂಗ್‌ನಲ್ಲಿ ಯೋಧರಿಂದ ಜೀವದಾನ ಸಿಕ್ಕಿದನ್ನ ಸ್ಮರಿಸಿದ ರಮ್ಯಾ

Public TV
1 Min Read

ಕಿರುತೆರೆ ಜನಪ್ರಿಯ Weekend With Ramesh 5 ಶೋನಲ್ಲಿ ಸಾಧಕರ ಸೀಟ್ ಅನ್ನ ರಮ್ಯಾ ಅಲಂಕರಿಸಿದ್ದಾರೆ. ರಮ್ಯಾ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಅನೇಕ ವಿಚಾರಗಳು ಈ ಶೋ ಮೂಲಕ ತಿಳಿದು ಬಂದಿದೆ. ಸಿನಿಮಾ-ರಾಜಕೀಯ ಹೀಗೆ ಸಾಕಷ್ಟು ವಿಚಾರಗಳನ್ನು ನಟಿ ಹಂಚಿಕೊಂಡಿದ್ದಾರೆ. `ಅಮೃತಧಾರೆ’ (Amruthadaare) ಚಿತ್ರದಲ್ಲಿ ಬಿಗ್ ಬಿ ಜೊತೆ ನಟಿಸಿದ ಅನುಭವವನ್ನ ನಟಿ ಹೇಳಿದ್ದಾರೆ. ಇದನ್ನೂ ಓದಿ: ನನ್ನ ಜೀವನದ 3ನೇ ಪ್ರಭಾವಶಾಲಿ ವ್ಯಕ್ತಿ ರಾಹುಲ್‌ ಗಾಂಧಿ – ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ರಮ್ಯಾ ಮಾತು

2015ರ `ಅಮೃತಧಾರೆ’ ಚಿತ್ರದಲ್ಲಿ ಧ್ಯಾನ್‌ಗೆ ನಾಯಕಿಯಾಗಿ ರಮ್ಯಾ (Ramya)  ನಟಿಸಿದ್ದರು. ಈ ಸಿನಿಮಾ ಜನರಿಗೆ ತಲುಪುವಲ್ಲಿ ಯಶಸ್ವಿಯಾಗಿತ್ತು. ವೀಕೆಂಡ್ ಟೆಂಟ್‌ನಲ್ಲಿ ರಮ್ಯಾ ಅಮಿತಾಬ್ ಬಚ್ಚನ್ (Amithab Bacchan) ಜೊತೆ ನಟಿಸಿದ್ದನ್ನು ಖುಷಿಯಿಂದ ನೆನಪಿಸಿಕೊಂದ್ದಾರೆ. ಹುಡುಗ-ಹುಡುಗ ಹಾಡಿನ ಚಿತ್ರೀಕರಣದ ವೇಳೆ ರಮ್ಯಾ ಆಮ್ಲಜನಕದ ಕೊರತೆಯಿಂದ ಪ್ರಜ್ಞೆತಪ್ಪಿ ಬಿದ್ದಿದ್ದು, ಯೋಧರಿಂದ ತಮಗೆ ಜೀವದಾನ ಸಿಕ್ಕ ಘಟನೆಗಳನ್ನು ನೆನಪಿಸಿಕೊಂಡರು. ಧ್ಯಾನ್ ಅಲಿಯಾಸ್ ಸಮೀರ್ ಅವರಿಂದ ಬಿಗ್ ಬಿ `ಅಮೃತಧಾರೆ’ ಚಿತ್ರದಲ್ಲಿ ನಟಿಸಲು ಒಪ್ಪಿದ್ದರು ಎಂದು ರಮ್ಯಾ ಹಂಚಿಕೊಂಡರು.

ಬಳಿಕ `ಅಮೃತಧಾರೆ’ ಸಿನಿಮಾದ ನಾಯಕ ಧ್ಯಾನ್ ಹಾಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರುಗಳು ವಿಡಿಯೋ ಮೂಲಕ ರಮ್ಯಾರ ಸ್ನೇಹವನ್ನು ಕೊಂಡಾಡಿದರು. ರಮ್ಯಾರ ಸಿನಿಮಾಗಳನ್ನು ನಿರ್ದೇಶಿಸಿರುವ ಹಲವು ನಿರ್ದೇಶಕರು ರಮ್ಯಾರ ಸ್ನೇಹವನ್ನು, ಕೆಲಸದ ಬಗೆಗಿದ್ದ ಶ್ರದ್ಧೆಯನ್ನು ಕೊಂಡಾಡಿದರು.

ಸ್ಯಾಂಡಲ್‌ವುಡ್ ಯುವನಟಿಯರಾದ ಅಮೃತಾ ಅಯ್ಯಂಗಾರ್, `ದಿಯಾ’ ಸಿನಿಮಾದ ಖುಷಿ ಇನ್ನು ಕೆಲವರು ವೀಕೆಂಡ್ ವಿತ್ ರಮೇಶ್ ವೇದಿಕೆಗೆ ಆಗಮಿಸಿ ರಮ್ಯಾ ಅವರು ತಮಗೆ ಸ್ಪೂರ್ತಿ, ಆದರ್ಶ ಎಂದರು. ಬಳಿಕ ನೆರೆಯ ತಮಿಳುನಾಡು ಚಿತ್ರರಂಗದ ದೊಡ್ಡ ನಿರ್ದೇಶಕ ವೆಟ್ರಿಮಾರನ್ ಸಹ ವಿಡಿಯೋ ಕಳಿಸಿ ರಮ್ಯಾ ಅದ್ಭುತ ನಟಿ, ಬಹಳ ಸ್ನೇಹಜೀವಿ ಎಂದು ಕೊಂಡಾಡಿದರು.

Share This Article
Leave a Comment

Leave a Reply

Your email address will not be published. Required fields are marked *