ಭಾರತಕ್ಕೆ ವಿಶ್ವಕಪ್ ಟೂರ್ನಿ ಬಹಿಷ್ಕರಿಸೋ ಬೆದರಿಕೆ ಹಾಕಿದ ಪಾಕ್

Public TV
1 Min Read

ಇಸ್ಲಾಮಾಬಾದ್: ಏಷ್ಯಾ ಕಪ್ (AisaCup) ಟೂರ್ನಿಯಲ್ಲಿ ಭಾಗವಹಿಸಲು ಟೀಂ ಇಂಡಿಯಾ ಭಾರತಕ್ಕೆ ಬರ್ಲಿಲ್ಲ ಅಂದ್ರೆ, ಭಾರತದಲ್ಲಿ ನಡೆಯೋ ವಿಶ್ವಕಪ್ ಟೂರ್ನಿಗೆ ಪಾಕ್ ತಂಡವನ್ನು ಕಳಿಸಲ್ಲ ಎಂದು ಪಿಸಿಬಿ (PCB) ಅಧ್ಯಕ್ಷ ರಮಿಝ್ ರಾಜಾ (Ramiz Raja) ಘೋಷಿಸಿದ್ದಾರೆ.

ಈ ವಿಚಾರದಲ್ಲಿ ತಾವು ಕಠಿಣ ವೈಖರಿಯನ್ನೇ ಅನುಸರಿಸ್ತೇವೆ. ಪಾಕ್ ತಂಡ ಕಳೆದೊಂದು ವರ್ಷದಲ್ಲಿ ಎರಡು ಬಾರಿ ಬೋರ್ಡ್ ಆಫ್ ಬಿಲಿಯನ್ ಡಾಲರ್ ಎಕಾನಮಿ ತಂಡವನ್ನು ಸೋಲಿಸಿ ಉತ್ಕೃಷ್ಟ ಪ್ರದರ್ಶನ ತೋರಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಫೈನಲ್‍ನಲ್ಲಿ ಪಾಕ್‍ಗೆ ಸೋಲು – 12 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆರ್ಥಿಕ ವ್ಯವಸ್ಥೆ ಸುಧಾರಿಸಬೇಕಾದರೆ, ರಾಷ್ಟ್ರೀಯ ತಂಡದಿಂದ ಉತ್ತಮ ಪ್ರದರ್ಶನ ಮೂಡಿ ಬರುವುದು ಅನಿವಾರ್ಯ. ಇತ್ತೀಚೆಗೆ ನಮ್ಮ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿದೆ. ಭಾರತ ವಿರುದ್ಧ ಕಳೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋಲು ಕಂಡಿರಬಹುದು. ಆದರೆ 2021ರ ಟಿ20 ವಿಶ್ವಕಪ್ (T20 WorldCup) ಹಾಗೂ ಏಷ್ಯಾ ಕಪ್ ಟೂರ್ನಿಗಳಲ್ಲಿ ಟೀಂ ಇಂಡಿಯಾವನ್ನು (Team India) ನಮ್ಮ ತಂಡ ಸೋಲಿಸಿದೆ. ಆ ಮೂಲಕ ಎಂತಹ ಬಲಿಷ್ಠ ತಂಡ ಎಂಬುದನ್ನು ತೋರಿಸಿದೆ ಎಂದು ರಮಿಝ್ ರಾಜಾ ಹೇಳಿದ್ದಾರೆ. ಇದನ್ನೂ ಓದಿ: ಅರ್ಜೆಂಟೀನಾಗೆ ಮಾಡು ಇಲ್ಲವೇ ಮಡಿ ಪಂದ್ಯ – ಕತಾರ್ ಕಥೆ ಮುಗಿಯಿತು

2023ರ ಸಾಲಿನ ಏಕದಿನ ವಿಶ್ವಕಪ್ ಕ್ರಿಕೆಟ್ (ODI WorldCup) ಟೂರ್ನಿಯ ಆಯೋಜನೆಯ ಹಕ್ಕನ್ನು ಬಿಸಿಸಿಐ (BCCI) ಈಗಾಗಲೇ ಪಡೆದುಕೊಂಡಿದೆ. ಒಂದು ವೇಳೆ ಪಾಕಿಸ್ತಾನ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಭಾರತಕ್ಕೆ ಬರಲು ಒಪ್ಪದಿದ್ದರೆ, ಈ ಮಹತ್ವದ ಟೂರ್ನಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದು ಐಸಿಸಿ (ICC) ಈಗಾಗಲೇ ಸ್ಪಷ್ಟಪಡಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *