ಕಾಂಗ್ರೆಸ್ ಷಡ್ಯಂತ್ರಕ್ಕೆ ರಮೇಶ್ ಜಾರಕಿಹೊಳಿ ಬಲಿಯಾಗಿದ್ದಾರೆ: ರೇಣುಕಾಚಾರ್ಯ

Public TV
2 Min Read

ದಾವಣಗೆರೆ: ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಪರ ಶಾಸಕ ರೇಣುಕಾಚಾರ್ಯ (MP Renukacharya) ಬ್ಯಾಟಿಂಗ್ ಮಾಡಿದ್ದಾರೆ. ರಮೇಶ್ ಜಾರಕಿಹೊಳಿಯನ್ನು ಬಲಿಪಶು ಮಾಡಲಾಗಿದೆ. ಕಾಂಗ್ರೆಸ್ ಷಡ್ಯಂತ್ರಕ್ಕೆ ರಮೇಶ್ ಜಾರಕಿಹೊಳಿ ಬಲಿಯಾಗಿದ್ದಾರೆ ಎಂದರು.

ಹೊನ್ನಾಳಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಚಿವ ಈಶ್ವರಪ್ಪ (K S Eshwarappa) ವಿರುದ್ಧ ಕೂಡ ಷಡ್ಯಂತ್ರ ಮಾಡಿದ್ರು. ಆದರೆ ಈಶ್ವರಪ್ಪ, ರಮೇಶ್ ಇಬ್ಬರೂ ಸದೃಢರಾಗಿದ್ದಾರೆ ಎಂದು ಹೇಳಿದರು.

ರಮೇಶ್ ಜಾರಕಿಹೊಳಿ ಆಡಿಯೋ ರಿಲೀಸ್ ವಿಚಾರದ ಕುರಿತು ಮಾತನಾಡಿ, ಡಿಕೆಶಿ ಅವರನ್ನು ನಾವು ಮುಗಿಸೋದಲ್ಲ, ಕಾಂಗ್ರೆಸ್ ಮುಖಂಡರೇ ರಾಜಕೀಯವಾಗಿ ಮುಗಿಸುತ್ತಾರೆ. ಕನಕಪುರ, ಸಾತನೂರು ಜನ ರಾಜಕೀಯವಾಗಿ ಮುಗಿಸುತ್ತಾರೆ. ಕಾಂಗ್ರೆಸ್ (Congress) ನಲ್ಲೇ ಸಿಎಂ ಗದ್ದಿಗೆಗೆ ಪೈಪೋಟಿ ಮಾಡುತ್ತಿದ್ದಾರೆ. ಸಿಎಂ ಅಭ್ಯರ್ಥಿಗಳು ಕ್ಯೂ ನಿಂತಿದ್ದಾರೆ. ಕಾಂಗ್ರೆಸ್ ಗೆ ತಾಕತ್ ಇದ್ದರೆ ಸಿಎಂ ಅಭ್ಯರ್ಥಿ ಘೋಷಣೆ ಮಾಡಿ ಚುನಾವಣೆಗೆ ಬರಲಿ ಎಂದು ಸವಾಲೆಸೆದರು.

ಭಾರತ್ ಜೋಡೋ ಕಾರ್ಯಕ್ರಮ ಸೋಮವಾರ ಮುಕ್ತಾಯ ಮಾಡಿದ್ದಾರೆ. ರಾಹುಲ್ ಗಾಂಧಿಗೆ ರಾಜಕೀಯ ಪ್ರಬುದ್ಧತೆ ಇಲ್ಲ. ಅವರಿಗೆ ದೇಶದ ಬಗ್ಗೆ ಕಾಳಜಿ ಗೌರವ ಇಲ್ಲ. 2024 ರಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತೆ. ಇದು ಭಾರತ್ ಜೋಡೋ ಯಾತ್ರೆ ಅಲ್ಲ ಭಾರತ್ ತೋಡೋ ಯಾತ್ರೆ. ಜನರು ಮೋದಿ, ಯಡಿಯೂರಪ್ಪ ಹಾಗೂ ಬೊಮ್ಮಾಯಿಯವರ ಅಡಳಿತ ಮೆಚ್ಚುಕೊಳ್ಳುತ್ತಿದ್ದಾರೆ. ಎಲ್ಲಾ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ ಎಂದರು. ಇದನ್ನೂ ಓದಿ: ಕೇಂದ್ರ ಬಜೆಟ್ ಮೇಲೆ ಜಗತ್ತು ಕಣ್ಣಿಟ್ಟಿದೆ: ಮೋದಿ

ಕಾಂಗ್ರೆಸ್ ನವರು ಅಪಪ್ರಚಾರ ಮಾಡುತ್ತಾರೆ. ಎಲ್ಲಾರೂ 40% ಅಡಳಿತ ಎಂದು ಆರೋಪ ಮಾಡುತ್ತಿದ್ದಾರೆ. ನಿಮ್ಮ ಅಡಳಿತ ದಲ್ಲಿ ತಟ್ಟೆ ಚೊಂಬಿನಲ್ಲಿ ಕೂಡ ಬಿಡಲಿಲ್ಲ. ವಿಜಯ ಬ್ಯಾಂಕ್ ಗೆ ಹಾಕಬೇಕು ಎಂದರೆ ಗೊತ್ತಾಗುತ್ತದೆ ಅಂದಿನ ಅಡಳಿತದಲ್ಲಿ ಹೇಗಿದೆ ಭ್ರಷ್ಟಾಚಾರ ಎಂದು. ನೀವು ಅಧಿಕಾರದಲ್ಲಿಇದ್ದಾಗ ಧರ್ಮಗಳ ನಡುವೆ ಸಂಘರ್ಷ ಮಾಡಿಸಿದ್ರಿ. ಟಿಪ್ಪು ಜಯಂತಿ (Tippu Jayanti) ಮಾಡಿ ಹಿಂದೂ ಯುವಕರ ಕಗ್ಗೊಲೆ ಮಾಡಿಸಿದ್ರಿ. ಕುರ್ಚಿಗಾಗಿ ಎಲ್ಲಾವೂ ಉಚಿತವಾಗಿ ನೀಡುತ್ತೇವೆ ಎಂದು ಹೇಳುತ್ತಿದ್ದೀರಿ. ನೀವು ಅಧಿಕಾರದಲ್ಲಿ ಇದ್ದಾಗ ಭ್ರಷ್ಟಾಚಾರ ಮಾಡುವುದು ಬಿಟ್ಟು ಉಚಿತವಾಗಿ ಕೊಡಲಿಲ್ಲ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನರು 20-30 ಸಾವಿರ ಮತಗಳಿಂದ ಗೆಲ್ಲಿಸುತ್ತಾರೆ ಎಂದು ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.

ಅಕಾಂಕ್ಷಿಗಳು ಇದ್ದಾರೆ ಎಂದು ಮಾಧ್ಯಮದಲ್ಲಿಯೇ ಬರುತ್ತಿದೆ. ಅಭ್ಯರ್ಥಿ ಯಾರು ಎಂದು ಜನರಿಗೆ ಹೋಗಿ ಕೇಳಿಕೊಂಡು ಬನ್ನಿ . ಟಿಕೆಟ್ ಕೊಟ್ಟರೆ ನಿಂತು ಗೆಲ್ಲುತ್ತೇನೆ, ಇಲ್ಲವಾದ್ರೆ ಪಕ್ಷಕ್ಕೆ ಕೆಲಸ ಮಾಡುತ್ತೇನೆ. ಫೆಬ್ರವರಿ ಕೊನೆವಾರದಲ್ಲಿ ಅಮಿತ್ ಶಾ (Amitshah) ಇಲ್ಲ ಮೋದಿ (Narendra Modi) ಹೊನ್ನಾಳಿ ಗೆ ಬರುವ ಸಾಧ್ಯತೆ ಇದೆ. ಅಮಿತ್ ಶಾ, ಮೋದಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *