ಆರ್ಚ್ ಮೇಲ್ಭಾಗದ ಕಲ್ಲು ಟ್ರ್ಯಾಕ್ಟರ್ ಮೇಲೆ ಬಿದ್ದು ಚಾಲಕ ಸಾವು

Public TV
1 Min Read

ರಾಮನಗರ: ಜಮೀನಿನ ಬಳಿ ನಿರ್ಮಿಸಿದ್ದ ಆರ್ಚ್ ಮೇಲ್ಭಾಗದ ಕಲ್ಲು ಬಿದ್ದು ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಾಗಡಿ ತಾಲೂಕಿನ ಚನ್ನಮ್ಮನ ಪಾಳ್ಯದಲ್ಲಿ ನಡೆದಿದೆ.

ಮಾಗಡಿಯ ಚನ್ನಮ್ಮನ ಪಾಳ್ಯದ ನಿವಾಸಿ ಶಂಕರ್ (34) ಮೃತ ದುರ್ದೈವಿ. ಶಂಕರ್ ಚನ್ನಮ್ಮನ ಪಾಳ್ಯದ ಸಿವಿಲ್ ಇಂಜಿನಿಯರ್ ಗಿರಿಯಪ್ಪ ಅವರ ಜಮೀನಿನಲ್ಲಿನ ರಾಗಿನ ಹುಲ್ಲನ್ನು ಟ್ರ್ಯಾಕ್ಟರ್ ನಲ್ಲಿ ತುಂಬಿಕೊಂಡು ಬರುತ್ತಿದ್ದರು. ಈ ವೇಳೆ ಎತ್ತರವಾಗಿದ್ದ ಹುಲ್ಲು ಕಮಾನಿನ ಮೇಲ್ಭಾಗದ ಕಲ್ಲಿಗೆ ತಾಕಿದೆ. ಪರಿಣಾಮ ಕಲ್ಲು ಶಂಕರ್ ಮೇಲೆ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಲ್ಲು ಬಿದ್ದಿದ್ದರಿಂದ ಟ್ರ್ಯಾಕ್ಟರ್ ಎರಡು ಭಾಗವಾಗಿದ್ದು, ಶಂಕರ್ ಮೃತ ದೇಹವು ಟ್ರ್ಯಾಕ್ಟರ್ ಹಾಗೂ ಕಲ್ಲಿನ ಮಧ್ಯೆ ಸಿಲುಕಿತ್ತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕ್ರೇನ್ ಸಹಾಯದಿಂದ ಕಲ್ಲನ್ನು ಮೇಲೆತ್ತಿ ಶಂಕರ್ ಮೃತದೇಹವನ್ನು ಹೊರ ತೆಗೆದಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಸಂಬಂಧ ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತ ಶಂಕರ್ ಕುಟುಂಬಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *