ಶಾಸಕರ ಖರೀದಿ ಮಾಡಲು ಯೋಗೇಶ್ವರ್ ಗೆ 20, 30 ಕೋಟಿ ಎಲ್ಲಿಂದ ಬಂತು: ಹೆಚ್‍ಡಿಕೆ ಪ್ರಶ್ನೆ

Public TV
1 Min Read

ರಾಮನಗರ: ನಾನು ಸಿಎಂ ಆಗಿದ್ದಾಗ ಪಾಪದ ಹಣವನ್ನು ಶೇಖರಣೆ ಮಾಡಿ 10 ಜನ ಎಂಎಲ್‍ಎಗಳನ್ನು ಖರೀದಿ ಮಾಡುವುದಕ್ಕೆ ಸಾಧ್ಯವಿರಲಿಲ್ಲವೇ? 20, 30 ಕೋಟಿಯನ್ನು ಎಂಎಲ್‍ಎಗಳಿಗೆ ಕೊಟ್ಟು ಅವರನ್ನು ಖರೀದಿ ಮಾಡಿ ನನ್ನ ಸರ್ಕಾರವನ್ನು ಬೀಳಿಸಿದರು. ಅದರ ನೇತೃತ್ವವನ್ನು ಮಾಜಿ ಶಾಸಕ ಯೋಗೇಶ್ವರ್ ವಹಿಸಿಕೊಂಡಿದ್ದರು. ಅವರಿಗೆ ಆ ಹಣ ಎಲ್ಲಿಂದ ಬಂತು ಎಂದು ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್‍ಎಸ್‍ಎಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮಾತನಾಡಿದ ಅವರು ನಾನು ಮಾಡಿದ ಸಾಲಮನ್ನಾ ಯೋಜನೆ ಸರ್ಟಿಫಿಕೇಟ್ ಸಿಗಲಿಲ್ಲ. ಸಾಲ ಮನ್ನಾ ಯೋಜನೆಯನ್ನಾ ಕೆಲ ಮೀಡಿಯಾದವರು ಅಪಪ್ರಚಾರವನ್ನ ಮಾಡಿದರು. ನಾನು ಸಾಲಮನ್ನಾ ಮಾಡುವ ಮೂಲಕ ರಾಜ್ಯದ ಆರ್ಥಿಕ ಸ್ಥಿತಿಯನ್ನು ಹದಗೆಡಿಸುವ ಕೆಲಸಕ್ಕೆ ಕೈಹಾಕಲಿಲ್ಲ ಎಂದು ಹೇಳಿದರು.

224 ಕ್ಷೇತ್ರಗಳಲ್ಲಿ ಎಷ್ಟು ಕುಟುಂಬಗಳಿಗೆ ಸಾಲಮನ್ನಾ ಯೋಜನೆಯ ಪಲಾನುಭವಿಗಳಿದ್ದಾರೆ ಎಂಬ ಬುಕ್ ಮಾಡುತ್ತಿದ್ದು ಅದನ್ನ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ. ಆಗಲಾದರೂ ಮಾಧ್ಯಮದವರು ಏನ್ ಮಾಡುತ್ತಾರೆ ನೋಡೋಣ? ಅಧಿಕಾರದಿಂದ ಕೆಳಗಿಳಿದು ಬರುವಾಗ ಸಂತೋಷದಿಂದಲೇ ಬಂದೆ. ಇದೀಗ ಉತ್ತರ ಕರ್ನಾಟಕದಲ್ಲಿ ಜನ ಬೀದಿಗೆ ಬಿದ್ದಿದ್ದಾರೆ ಮಕ್ಕಳು ಶಾಲೆಗೆ ಹೋಗಲಾಗ್ತಿಲ್ಲ. ಸರ್ಕಾರಕ್ಕೆ ಅವರ ಬಗ್ಗೆ ಗಮನವಿಲ್ಲ ಎಂದು ರಾಜ್ಯ ಸರ್ಕಾರದ ಮೇಲೆ ಕಿಡಿಕಾರಿದರು.

ನಾನು ಸಿಎಂ ಸ್ಥಾನದಲ್ಲಿ ಕೂತು ಪಾಪದ ಹಣ ಶೇಖರಣೆ ಮಾಡಿ 10 ಶಾಸಕರನ್ನು ಖರೀದಿ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಬಹುದಿತ್ತಲ್ವಾ. ಸರ್ಕಾರ ಬೀಳಿಸೋಕೆ ಲೀಡರ್ ಶಿಪ್ ವಹಿಸಿದ್ದು ಚನ್ನಪಟ್ಟಣದ ಮಾಜಿ ಶಾಸಕ ಯೋಗೇಶ್ವರ್. ಅವರಿಗೆ 20, 30 ಕೋಟಿ ಶಾಸಕರಿಗೆ ನೀಡೋಕೆ ಹಣ ಎಲ್ಲಿಂದ ಬಂತು? ಯಾವ ಪುರುಷಾರ್ಥಕ್ಕೆ ಸರ್ಕಾರವನ್ನು ಬೀಳಿಸಿದರು ಎಂದು ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *