ಸಿದ್ದರಾಮಯ್ಯ, ಖರ್ಗೆ ಆಯ್ತು ಇದೀಗ ಸಿಎಂ ರೇಸಲ್ಲಿ ರಾಮಲಿಂಗಾರೆಡ್ಡಿ

Public TV
1 Min Read

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದ ರೇಸಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಕೇಳಿ ಬಂದಿತ್ತು. ಆದರೆ ಈಗ ಆರ್‍ಎಲ್ ಎಂದರೆ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ಹೆಸರು ಕೇಳಿ ಬರುತ್ತಿದೆ.

ರೆಬೆಲ್ ಶಾಸಕ ರಾಮಲಿಂಗಾರೆಡ್ಡಿ ಮುಂದಿನ ಸಿಎಂ ಎಂದು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೇನ್ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಗರು ರಾಮಲಿಂಗಾ ರೆಡ್ಡಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಕರ್ನಾಟಕದ ಮುಂದಿನ ಮುಖ್ಯಮಂತ್ರಿ RLR ಎಂದು ಕ್ಯಾಂಪೇನ್ ಶುರು ಮಾಡಿದ್ದಾರೆ. ಅಲ್ಲದೆ ‘ವಿ ಸ್ಟ್ಯಾಂಡ್ ವಿತ್ ರಾಮಲಿಂಗಾರೆಡ್ಡಿ ಫಾರ್ ಸಿಎಂ’, ‘ಆರ್ ಎಲ್ ಆರ್ ಫಾರ್ ಸಿಎಂ’ ಹಾಗೂ ‘ವಾಯ್ಸ್ ಆಫ್ ಕರ್ನಾಟಕ ನಮ್ಮ ರಾಮಲಿಂಗಾರೆಡ್ಡಿ’ ಎಂದು ರಾಮಲಿಂಗಾ ರೆಡ್ಡಿ ಬೆಂಬಲಿಗರು ಅಭಿಯಾನ ನಡೆಸುತ್ತಿದ್ದಾರೆ.

ನಮ್ಮ ಮುಂದಿನ ಮುಖ್ಯಮಂತ್ರಿ ರಾಮಲಿಂಗಾರೆಡ್ಡಿ ಎಂಬ ಮೆಸೇಜ್‍ಗಳನ್ನು ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಸುತ್ತಿದ್ದಾರೆ. ಸರ್ಕಾರ ಅಡಕತ್ತರಿಯಲ್ಲಿ ಇರುವಾಗ ಬೆಂಬಲಿಗರಿಗೆ ತಮ್ಮ ನಾಯಕರ ಮುಖ್ಯಮಂತ್ರಿ ಪಟ್ಟದ ಬಗ್ಗೆ ಚಿಂತೆ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *