ಹೃದ್ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ನೆರವಾಗಲಿದೆ ರಾಮ್​ ಕಿಟ್​- ಏನಿದು?, ಉಪಯೋಗವೇನು?

Public TV
1 Min Read

– ರಾಮ್‌ ಕಿಟ್‌ ಪರಿಕಲ್ಪನೆ ಏನು..?

ಕಾನ್ಪುರ: ಹೃದಯಾಘಾತವಾದಾಗ ತಕ್ಷಣ ನೀಡುವ ಚಿಕಿತ್ಸೆಗಳು ಒಬ್ಬ ವ್ಯಕ್ತಿಯ ಜೀವ ಉಳಿಸುವಲ್ಲಿ ಪ್ರಮುಖವಾಗಿವೆ. ಈ ಹಿನ್ನೆಲೆಯಲ್ಲಿ ಅಗತ್ಯ ಔಷಧ ಹೊಂದಿರುವ ಕಿಟ್​ ಅನ್ನು ಉತ್ತರ ಪ್ರದೇಶದ (Uttar Pradesh) ಆಸ್ಪತ್ರೆಯೊಂದು ಅಭಿವೃದ್ಧಿಪಡಿಸಿದೆ. ಅದಕ್ಕೆ ‌ʼರಾಮ್ ಕಿಟ್ʼ (Ram Kit)​ ಎಂದು ಹೆಸರಿಟ್ಟಿದೆ.

ಕಾನ್ಪುರದ ಲಕ್ಷ್ಮೀಪತ್ ಸಿಂಘಾನಿಯಾ ಇನ್ಸಿಟಿಟ್ಯೂಟ್ ಆಫ್ ಕಾರ್ಡಿಯಾಲಾಜಿ ಮತ್ತು ಕಾರ್ಡಿಯಾಕ್ ಸರ್ಜರಿ ಅಭಿವೃದ್ಧಿಪಡಿಸಿದೆ. ಪ್ರಯಾಗ್ರಾಜ್ ಜಿಲ್ಲೆಯ ಸುಮಾರು 5 ಸಾವಿರ ಕುಟುಂಬಗಳಿಗೆ ಕಂಟೋನ್ಮೆಂ ಟ್ ಆಸ್ಪತ್ರೆಯ ಅಧಿಕಾರಿ ರಾಮ್ ಕಿಟ್ ನೀಡಲಿದ್ದಾರೆ. ಈ ರೀತಿಯ ಕಿಟ್ ನೀಡುತ್ತಿರುವ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ಕೂಡ ಈ ಆಸ್ಪತ್ರೆ ಪಾತ್ರವಾಗಿದೆ.

ಕಿಟ್‌ನಲ್ಲಿ ಏನಿದೆ..?: ರಾಮನ ಚಿತ್ರದೊಂದಿಗೆ ಜೀವ ಉಳಿಸುವ ಪ್ರಮುಖ ಔಷಧಗಳು ಮತ್ತು ಆಸ್ಪತ್ರೆಯ ಸಹಾಯವಾಣಿಯ ಸಂಖ್ಯೆ ಇದೆ. ಜೊತೆಗೆ ‘ನಾವು ಚಿಕಿತ್ಸೆ ನೀಡುತ್ತೇವೆ. ರಾಮ ಗುಣಪಡಿಸುತ್ತಾರೆ ಎಂಬ ಪರಿಕಲ್ಪನೆಯನ್ನು ಈ ಕಿಟ್‌ ಹೊಂದಿದೆ. ಇದನ್ನೂ ಓದಿ: ಸರಯೂ ನದಿ ತಟದಲ್ಲಿ 1008 ಯಜ್ಞ ಮಂಟಪ ನಿರ್ಮಾಣ – 21 ಸಾವಿರ ಯತಿಗಳಿಂದ ರಾಮನಾಮ ಮಹಾ ಯಜ್ಞ

ರಾಮ್ ಕಿಟ್‌ನಲ್ಲಿ ಇಕೋಸ್ಪಿನ್ (ರಕ್ತ ತೆಳುಗೊಳಿಸುವ), ರೋಸುವಾಸ್ಟಾಟಿನ್ (ಕೊಲೆಸ್ಟ್ರಾಲ್ ನಿಯಂತ್ರಣ) ಮತ್ತು ಸೋರ್ಬಿಟ್ರೇ ಟ್ (ಹೃದಯದ ಉತ್ತಮ ಕಾರ್ಯಾಚರಣೆ) ಔಷಧಗಳನ್ನು ಇದು ಹೊಂದಿದೆ. ಈ ಔಷಧಗಳು ಹೃದಯದ ಸಮಸ್ಯೆ ಹೊಂದಿರುವವರಿಗೆ ತಕ್ಷಣದ ಪರಿಹಾರ ನೀಡುತ್ತದೆ. ಚಳಿಗಾಲದಲ್ಲಿ ಹೃದ್ರೋ ಗ ಮತ್ತು ಮಿದುಳಿನ ಪಾರ್ಶ್ವವಾಯು ಪ್ರಕರಣ ಹೆಚ್ಚುವ ಹಿನ್ನೆಲೆಯಲ್ಲಿ ರಾಮ್ ಕಿಟ್ ಪ್ರತಿಯೊಬ್ಬರಿಗೂ ಉಪಯೋಗವಾಗಲಿದೆ. ರೋಗಿಯ ಗೋಲ್ಡನ್ ಹವರ್‌ನಲ್ಲಿ ಜೀವ ಉಳಿಸಲು ಸಹಾಯ ಮಾಡುತ್ತದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಕೆ ಪಾಂಡೆ ವಿವರಿಸಿದ್ದಾರೆ.

ಈ ಸಂಬಂಧ ನ್ಪುರದ ಲಕ್ಷ್ಮೀ ಪತ್ ಸಿಂಘಾ ನಿಯಾ ಇನ್ಸಿಟಿಟ್ಯೂಟ್ ಆಫ್ ಕಾರ್ಡಿಯಾಲಾಜಿ ಮತ್ತು ಕಾರ್ಡಿಯಾಕ್ ಸರ್ಜರಿಯ ಹಿರಿಯ ಹೃದ್ರೋ ಗ ತಜ್ಞ ಡಾ.ನೀರಾಜ್ ಕುಮಾರ್ ಪ್ರತಿಕ್ರಿಯಿಸಿ, ರಾಮನ ಮೇಲೆ ಇರುವ ನಂಬಿಕೆಯೇ ಇದಕ್ಕೆ ರಾಮ್ ಕಿಟ್ ಎಂದು ಹೆಸರಿಡಲು ಕಾರಣ ಎಂದಿದ್ದಾರೆ.

Share This Article