ರಾಖಿ ಕಟ್ಟಲು ಅಣ್ಣನ ಮನೆಗೆ ಬಂದರು -ಸಹೋದರನ ಜೀವವಿಲ್ಲದ ಕೈಗೆ ರಾಖಿ ಕಟ್ಟುವಂತಾಯ್ತು

Public TV
1 Min Read

ಹೈದರಾಬಾದ್: ರಾಖಿ ಕಟ್ಟಲೆಂದೇ ಐವರು ಸೋದರಿಯರು ಅಣ್ಣನ ಮನೆಗೆ ಬಂದ ದಿನ, ಅಣ್ಣ ಅಕಾಸ್ಮಾತ್ ಆಗಿ ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಚಿಂತಪಲ್ಲಿ ಲಕ್ಷ್ಮಯ್ಯ (59) ಮೃತರಾಗಿದ್ದಾರೆ. ರಕ್ಷಾಬಂಧನದಂದು ಅಣ್ಣನಿಗೆ ರಾಖಿ ಕಟ್ಟಲೆಂದೇಂದು ಸಹೋದರಿಯರು ಬಂದ ದಿನವೇ ಈತ ಪ್ರಾಣ ಬಿಟ್ಟಿದ್ದಾನೆ. ಐವರು ಸಹೋದರಿಯರು ಕಣ್ಣೀರು ಹಾಕುತ್ತಾ ಅಣ್ಣನ ಕೈಗೆ ರಾಖಿ ಕಟ್ಟಿದ್ದಾರೆ. ಇದನ್ನೂ ಓದಿ: ಆರು ಜಿಲ್ಲೆಗಳ ರಸ್ತೆಗೆ ದಿವಂಗತ ಕಲ್ಯಾಣ್ ಸಿಂಗ್ ಹೆಸರು

ರಾಖಿ ಕಟ್ಟಲೆಂದು ಐವರು ಸೋದರಿಯರು ಶನಿವಾರ ಸಂಜೆಯೇ ವಿವಿಧ ಗ್ರಾಮಗಳಿಂದ ತವರುಮನೆಗೆ ಬಂದಿದ್ದರು. ಮರುದಿನ ಬೆಳಗ್ಗೆಯಷ್ಟೊತ್ತಿಗೆ ಲಕ್ಷ್ಮಯ್ಯ ಆಕಸ್ಮಾತ್ ಆಗಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದಾನೆ. ತೆಲಂಗಾಣದ ನಲಗೊಂದಾ ಜಿಲ್ಲೆಯ ಇಂಡುಗುಲಾ ಗ್ರಾಮ ಪಂಚಾಯಿತಿಯಲ್ಲಿ ಹೀಗೊಂದು ಘಟನೆ ನಡೆದಿದೆ. ಇದನ್ನೂ ಓದಿ: ವಿಭಿನ್ನವಾಗಿ ರಕ್ಷಾ ಬಂಧನ ಆಚರಿಸಿದ ಸೆಲೆಬ್ರಿಟಿಗಳು

ಲಕ್ಷ್ಮಯ್ಯನ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲಾಯಿತು. ಅದಕ್ಕೂ ಮೊದಲು ಸೋದರಿಯರಾದ ಎರಾ ಲಕ್ಷ್ಮಮ್ಮ, ನಾಮಾ ಪದ್ಮಾ, ಅಲ್ಲಾಪುರಿ ವೆಂಕಟಮ್ಮ, ಕದಿರಿ ಕೋಟಮ್ಮಾ ಮತ್ತು ಜಕ್ಕಿ ಕವಿತಾ ಅಣ್ಣನ ಜೀವವಿಲ್ಲದ ಕೈಯಿಗೆ ರಾಖಿ ಕಟ್ಟಿದ್ದಾರೆ. ಈ ಐವರು ಇಷ್ಟು ವರ್ಷದಲ್ಲಿ ಒಂದು ಬಾರಿಯೂ ತಮ್ಮ ಸೋದರ ಲಕ್ಷ್ಮಯ್ಯನವರಿಗೆ ರಾಖಿ ಕಟ್ಟುವುದನ್ನು ತಪ್ಪಿಸಿರಲಿಲ್ಲ. ಆದರೆ ಈ ಬಾರಿ ತನ್ನ ಎಲ್ಲ ಸೋದರಿಯರ ಎದುರೇ, ರಕ್ಷಾ ಬಂಧನದಂದೇ ಲಕ್ಷ್ಮಯ್ಯ ತೀರಿಕೊಂಡಿದ್ದಾನೆ. ಸೋದರಿಯರು ಜೀವವಿಲ್ಲದ ಸೋದರನ ಕೈಗೆ ರಾಖಿ ಕಟ್ಟುವುದನ್ನು ನೋಡಿ ಇಡೀ ಹಳ್ಳಿಗರು ಕಣ್ಣಲ್ಲಿ ನೀರು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *