ಮೊಮ್ಮಗನ ಮದುವೆಗೆ ಬೆಂಗ್ಳೂರಿಗೆ ಬಂದ ರಜನಿಕಾಂತ್ – ನೋಡಲು ಮುಗಿಬಿದ್ದ ಅಭಿಮಾನಿಗಳು

Public TV
1 Min Read

ಬೆಂಗಳೂರು: ಮೊಮ್ಮಗನ ಮದುವೆಗೆ ಬಂದಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಇಂದು ಸಿಲಿಕಾನ್ ಸಿಟಿಯ ಸಹಕಾರ ನಗರದ ರಾಧಕೃಷ್ಣ ಕಲ್ಯಾಣ ಮಂಟಪದಲ್ಲಿ ಸಹೋದರನ ಪುತ್ರಿಯ ಮಗನ ಮದುವೆಗೆ ರಜನಿಕಾಂತ್ ಅವರು ಬಂದಿದ್ದರು. ಈ ವೇಳೆ ಅವರನ್ನು ನೋಡಲು ಸಾವಿರಾರು ಜನ ಅಭಿಮಾನಿಗಳು ಬಂದಿದ್ದು, ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ.

ರಜನಿಕಾಂತ್ ಸಹೋದರ ಸತ್ಯ ನಾರಾಯಣ್ ಅವರ ಮಗಳ ಮಗ ಎಂದರೆ ರಜನಿಕಾಂತ್ ಅವರ ಮೊಮ್ಮಗನ ಮದುವೆ ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಬಂದ ರಜನಿಕಾಂತ್ ಅವರನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದಲ್ಲದೇ ಅವರು ಕಾರಿನಲ್ಲಿ ಹೋಗುವಾಗ ಅವರನ್ನು ಬೈಕಿನಲ್ಲಿ ಫಾಲೋ ಮಾಡಿಕೊಂಡು ಹೋಗಿ ತಲೈವಾ ತಲೈವಾ ಎಂದು ಘೋಷಣೆ ಕೂಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *