ಬೆಂಗಳೂರಿಗೆ ತಂಪೆರೆದ ಮಳೆರಾಯ

Public TV
1 Min Read

ಬೆಂಗಳೂರು: ಬಿಸಿಲ ಬೇಗೆಯಿಂದ ಬೆಂದಿದ್ದ ಬೆಂಗಳೂರಿಗೆ (Bengaluru Rains) ಶನಿವಾರ ಮಳೆರಾಯ ತಂಪೆರೆದಿದ್ದಾನೆ. ರಾಜಧಾನಿಯ ಹಲವೆಡೆ ಮಳೆಯಾಗಿದೆ. ಮಳೆಯಾದ ಖುಷಿಯಲ್ಲಿ ಮಕ್ಕಳು ಕುಣಿದು ಕುಪ್ಪಳಿಸಿದ ದೃಶ್ಯ ಕಂಡುಬಂತು.

ನಗರದ ಸರ್ಕಲ್ ಮಾರಮ್ಮ , ಸ್ಯಾಂಕಿ, ಜಯನಗರ, ಜೆ.ಪಿ.ನಗರ, ಆರ್‌.ಆರ್‌. ನಗರ, ಮೇಖ್ರಿ ಸರ್ಕಲ್‌ ಸೇರಿದಂತೆ ಹಲವೆಡೆ ಮಳೆಯಾಗಿದೆ. ಕೆಲವೆಡೆ ಮೋಡ ಕವಿದ ವಾತಾವರಣ ಇದೆ. ಇದನ್ನೂ ಓದಿ: ರಾಜ್ಯದ ವಿವಿಧೆಡೆ ಮಳೆ ಅಬ್ಬರ; ಶಿವಮೊಗ್ಗ, ಬೀದರ್‌ನಲ್ಲಿ ವರುಣಾರ್ಭಟಕ್ಕೆ ಇಬ್ಬರು ಬಲಿ – ಇನ್ನೂ 3 ದಿನ ಮಳೆ ಮುನ್ಸೂಚನೆ

ಬೆಂಗಳೂರು ಅರಮನೆ ಮೈದಾನದ ಸುತ್ತಮುತ್ತ ಮಳೆಯಾಗುತ್ತಿದೆ. ಮೇಖ್ರಿ ಸರ್ಕಲ್‌ ಬಳಿ ಮಳೆ ಜೋರಾಗಿ ಸುರಿಯುತ್ತಿದೆ. ನಿನ್ನೆ ಕೂಡ ನಗರದ ಹಲವೆಡೆ ಮಳೆಯಾಗಿತ್ತು. ಕೆಂಗೇರಿ ಸೇರಿದಂತೆ ದೊಡ್ಡಬಳ್ಳಾಪುರ, ನೆಲಮಂಗದಲ್ಲಿ ನಿನ್ನೆ ಸಂಜೆ ವೇಳೆ ಮಳೆ ಸುರಿದಿತ್ತು.

Share This Article