ರಾಜ್ಯದಲ್ಲಿ 5 ದಿನ ಮುಂದುವರಿಯಲಿದೆ ಮಳೆ

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 5 ದಿನವೂ ವರುಣನ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸುಂದರ್ ಮೇತ್ರಿ ಹೇಳಿದ್ದಾರೆ.

ಅರಬ್ಬೀ ಸಮುದ್ರದ ಪೂರ್ವ ಕೇಂದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಹೀಗಾಗಿ ಮುಂದಿನ 5 ದಿನ ಮಳೆಯಾಗಲಿದೆ. 24 ಗಂಟೆಯಲ್ಲಿ ಮತ್ತಷ್ಟು ವಾಯುಭಾರ ಕುಸಿತ ಆಗುವ ಸಾಧ್ಯತೆ ಇದೆ. ಮತ್ತೆ 12 ಗಂಟೆ ಕಳೆದ ಮೇಲೆ ವಾಯುಭಾರ ಕುಸಿತದ ತೀವ್ರತೆ ಸಹ ಹೆಚ್ಚಾಗಲಿದೆ.

ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಭಾಗದಲ್ಲಿ ಹೆಚ್ಚು ಮಳೆಯಾಗಲಿದ್ದು, ಮಧ್ಯಾಹ್ನ, ರಾತ್ರಿ ವೇಳೆ ವರುಣನ ಅಬ್ಬರ ಹೆಚ್ಚಾಗಲಿದೆ. ತೀವ್ರವಾದ ವಾಯುಭಾರ ಕುಸಿತಕ್ಕೆ ಕಾರಣವಾಗಲಿದೆ. ಅಲ್ಲದೆ ಹುಬ್ಬಳಿ, ಧಾರವಾಡ, ಬೆಳಗಾವಿಯಲ್ಲೂ ಮಳೆ ದಾಖಲೆ ಮಾಡಿದೆ.

ಮತ್ತೆ ಬಂಗಾಳಕೊಲ್ಲಿಯಲ್ಲೂ ವಾಯುಭಾರ ಕುಸಿತ ಸಾಧ್ಯತೆ ಇದೆ. ಹೀಗಾಗಿ ಇದೇ ತಿಂಗಳ 23ರೊಳಗೆ ತಮಿಳುನಾಡು ಗಡಿಭಾಗ, ಆಂಧ್ರ ಭಾಗದಲ್ಲೂ ಮಳೆ ಹೆಚ್ಚಾಗಲಿದೆ. ಇತ್ತ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ದಕ್ಷಿಣ ಒಳನಾಡು ಪ್ರದೇಶದಲ್ಲೂ ಮಳೆಯಾಗಲಿದೆ. ಸುಮಾರು 5 ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಕನ್ನಡದಲ್ಲಿ 85 ಮಿ.ಮೀ, ಉಡುಪಿಯ ಕಾರ್ಕಾಳದಲ್ಲಿ 75 ಮಿ.ಮೀ, ಬಾಗಲಕೋಟೆಯಲ್ಲಿ 135 ಮಿ.ಮೀ, ಬೆಳಗಾವಿಯಲ್ಲಿ 92 ಮಿ.ಮೀ, ಧಾರವಾಡದಲ್ಲಿ 87 ಮಿ.ಮೀ, ಚಿಕ್ಕಮಗಳೂರಿನಲ್ಲಿ 165 ಮಿ.ಮೀ, ಮೈಸೂರಿನಲ್ಲಿ 89 ಮಿ.ಮೀ, ಚಿತ್ರದುರ್ಗ 82 ಮಿ.ಮೀ ಮಳೆ, ದಾವಣಗೆರೆ 78 ಮಿ.ಮೀ, ಶಿವಮೊಗ್ಗದಲ್ಲಿ 75 ಮಿ.ಮೀ ಮಳೆ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *