ಪಶ್ಚಿಮ ಘಟ್ಟವನ್ನು ಕಾಶ್ಮೀರವಾಗಿಸಿದ ಮಳೆಯ ಮಂಜು

Public TV
1 Min Read

– (ಚಿತ್ರ ಕೃಪೆ: ಗೋಪಿಜೋಲಿ)

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಾಗದಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ನ.1 ರ ವರೆಗೂ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಬೀಳುವ ಸೂಚನೆ ನೀಡಿದ್ದು, ಮಂಜು ಮುಸುಕಿದ ವಾತಾವರಣ ಹಾಗೂ ಚಳಿ ಬೀಳುವ ಸೂಚನೆ ನೀಡಿದೆ.

ಹೌದು, ಕಳೆದ ಮೂರ್ನಾಲ್ಕು ದಿನದಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಆಗಾಗ ಮಳೆ ಸುರಿದರೆ ಮುಂಜಾನೆ ಮತ್ತು ಸಂಜೆ ವೇಳೆ ದಟ್ಟ ಮಂಜು ಆವರಿಸುವ ಮೂಲಕ ಕರಾವಳಿಯನ್ನು ಕಾಶ್ಮೀರದ ಸೊಬಗಿಗೆ ವಾತಾವರಣ ಬದಲಿಸಿದೆ.

ಕರಾವಳಿಯ ಕಾಶ್ಮೀರ ಎಂದು ಉತ್ತರ ಕನ್ನಡ ಜಿಲ್ಲೆಗೆ ಪರ್ಯಾಯ ಹೆಸರುಂಟು. ಈ ಹೆಸರಿಗೆ ತಕ್ಕಂತೆ ಇದೀಗ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ಸೇರಿದಂತೆ ಕರಾವಳಿ ಭಾಗದಲ್ಲಿ ಮಂಜಿನ ವಾತಾವರಣ ಸೃಷ್ಟಿಯಾಗಿದ್ದು, ಕುಮಟಾದ ಗೋಪಿ ಅವರ ಕ್ಯಾಮೆರಾ ಕಣ್ಣಲ್ಲಿ ಸುಂದರ ದೃಶ್ಯಗಳು ಸೆರೆಯಾಗಿವೆ.

Share This Article