ಬೆಳ್ಳಂಬೆಳಗ್ಗೆ ಎಸಿಬಿ ಸರ್ಜಿಕಲ್ ಸ್ಟ್ರೈಕ್ -ನಗದು, ಚಿನ್ನದ ವಿಗ್ರಹ, ಬೆಳ್ಳಿ ಪತ್ತೆ

Public TV
1 Min Read

ಬೆಳಗಾವಿ: ಬೆಳ್ಳಂಬೆಳಗ್ಗೆ ಎಸಿಬಿ ಸರ್ಜಿಕಲ್ ಸ್ಟ್ರೈಕ್ ಆರಂಭ ಮಾಡಿದ್ದು, ಬೆಂಗಳೂರಿನಿಂದ ಈಗ ಬೆಳಗಾವಿಯ ಜಿಲ್ಲೆಯ ಖಾನಾಪುರ ತಾಲೂಕಿನ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಯ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಎಸಿಪ್ ಅಧಿಕಾರಿ ಚಂದ್ರಕಾತ ಪಾಟೀಲ್ ಅವರ ಮನೆ, ಖಾನಾಪುರದಲ್ಲಿರುವ ಕಚೇರಿ ಹಾಗೂ ಬೈಲಹೊಂಗಲದಲ್ಲಿರುವ ಸಹೋದರನ ಮನೆ ಸೇರಿದಂತೆ ಮೂರು ಕಡೆ ದಾಳಿ ನಡೆಸುತ್ತಿದ್ದಾರೆ. ಎಸಿಬಿ ಎಸ್.ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ಮಾಡಲಾಗುತ್ತಿದೆ.

ಎಸಿಎಫ್ ಚಂದ್ರಗೌಡ ಪಾಟೀಲ್ ನಿವಾಸದ ಮೇಲೆ ದಾಳಿ ಮಾಡಿದ ವೇಳೆ 10 ಲಕ್ಷಕ್ಕೂ ಅಧಿಕ ನಗದು, 500 ಗ್ರಾಂ ಅಧಿಕ ಚಿನ್ನ, 3 ಕೆ.ಜಿ ಗೂ ಅಧಿಕ ಬೆಳ್ಳಿ, ಚಿನ್ನದ ವಿಗ್ರಹ ಸಿಕ್ಕಿದೆ. ಇತ್ತ ಬೈಲಹೊಂಗಲದಲ್ಲಿ ಎರಡು ಜೆಸಿಬಿ, ಆಸ್ತಿ ಪತ್ರ ಹಾಗೂ ಬೆಳಗಾವಿ ಹನುಮಾನ್ ನಗರದ ಹಿಂಡಲಗಾ ಜೈಲ್ ಬಳಿ ಸೈಟ್ ಖರೀದಿ ಮಾಡಿರುವ ಪತ್ರ, ನಗದು ಹಾಗೂ ಚಿನ್ನಾಭರಣ ಪತ್ತೆಯಾಗಿದ್ದು, ವಶಕ್ಕೆ ಪಡೆದುಕೊಂಡಿದ್ದಾರೆ.

ಎಸಿಎಫ್ ಚಂದ್ರಗೌಡ ಪಾಟೀಲ್ ನಿವಾಸ, ಬೈಲಹೊಂಗಲದಲ್ಲಿರುವ ಸಹೋದರನ ಮನೆಯಲ್ಲೂ ದಾಳಿ ಮುಂದುವರಿದಿದ್ದು, ಹತ್ತು ಜನರ ತಂಡದಿಂದ ಮನೆಯಲ್ಲಿ ಪರಿಶೀಲನೆಯನ್ನು ಮುಂದುವರಿಸಿದ್ದಾರೆ. ಎಸಿಬಿ ಅಧಿಕಾರಿಗಳು ಮಧ್ಯಾಹ್ನ 2 ಗಂಟೆವರೆಗೂ ಶೋಧಕಾರ್ಯ ಮಾಡಲಾಗುತ್ತದೆ. ನಂತರ ದಾಳಿಯ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸೋದಾಗಿ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *