ಪರಮೇಶ್ವರ್ ಡಿಸಿಎಂ ಹುದ್ದೆಗೆ ತಕ್ಕ ಕೆಲಸ ಮಾಡಬೇಕು – ಶಿವನಗೌಡ ನಾಯಕ್

Public TV
1 Min Read

ರಾಯಚೂರು: ಡಿಸಿಎಂ ಪರಮೇಶ್ವರ್ ಹೋಗುವ ಮಾರ್ಗದಲ್ಲಿ ಬಿಜೆಪಿ ಬಾವುಟ ಹಾಕಿದಕ್ಕೆ ನೋಟಿಸ್ ನೀಡಿರುವ ವಿಚಾರಕ್ಕೆ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಸೇರಿ ರಾಯಚೂರಿನ ಬಿಜೆಪಿ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಿವನಗೌಡ ನಾಯಕ್ ಅವರು, ಪರಮೇಶ್ವರ್ ಡಿಸಿಎಂ ಹುದ್ದೆಗೆ ತಕ್ಕ ಕೆಲಸ ಮಾಡಬೇಕು. ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುವವರ ಮೇಲೆ ದರ್ಪ ತೋರುವುದು ಸರಿಯಲ್ಲ. ಲೋಕಸಭಾ ಚುನಾವಣೆಯ ಸೋಲಿನಿಂದ ಅವರು ಇನ್ನೂ ಹೊರಗೆ ಬಂದಿಲ್ಲ, ಅದಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಧಾನಮಂತ್ರಿ ಜನರಿಕ್ ಔಷಧಿ ಮಳಿಗೆ ಯಾವ ಸರ್ಕಾರದ್ದು ಅಲ್ಲ. ಅಂಗಡಿಯ ಮಾಲೀಕ ಬಿಜೆಪಿ ಪಕ್ಷದ ಮೇಲಿನ ಅಭಿಮಾನದಿಂದ ಬಾವುಟ ಹಾಕಿಕೊಂಡಿದ್ದಾರೆ ಅಷ್ಟೇ. ಸರ್ಕಾರಿ ಕಚೇರಿ ಮೇಲೆ ಬಾವುಟ ಹಾಕಿದ್ದರೆ ಕ್ರಮ ತೆಗೆದುಕೊಳ್ಳಬೇಕು. ಖಾಸಗಿಯವರು ಬಾವುಟ ಹಾಕಿಕೊಂಡರೆ ತಪ್ಪು ಏನು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಡೆದಿದ್ದೇನು?
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿರುವ ಪ್ರಧಾನಮಂತ್ರಿ ಜನರಿಕ್ ಔಷಧ ಅಂಗಡಿ ಮಾಲೀಕ ಕೆ.ಎನ್ ರವಿ ಎಂಬುವವರು ತಮ್ಮ ಅಂಗಡಿ ಮುಂದೆ ಬಿಜೆಪಿ ಬಾವುಟ ಹಾಕಿದ್ದಕ್ಕೆ ಗ್ರಾಮ ಪಂಚಾಯತಿಯ ಪಿಡಿಓ ನೋಟಿಸ್ ನೀಡಿದ್ದಾರೆ. ಇದಕ್ಕೆ ಶನಿವಾರ ಡಿಸಿಎಂ ಪರಮೇಶ್ವರ್ ಅವರು ತೋವಿನಕೆರೆಯಲ್ಲಿ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಈ ಸಂದರ್ಭದಲ್ಲಿ ತುಮಕೂರಿನ ಕೆಸ್ತೂರು ರಸ್ತೆಯಲ್ಲಿರುವ ಔಷಧಿ ಅಂಗಡಿಯ ಮುಂದೆ ಡಿಸಿಎಂ ವಾಹನ ಹೋಗಬೇಕಿತ್ತು. ಹೀಗಾಗಿ ಅಂಗಡಿಯ ಮುಂದೆ ಇದ್ದ ಬಾವುಟವನ್ನು ನೋಡಿ ಡಿಸಿಎಂ ಮುಜಗರಗೊಂಡಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಬಾವುಟ ತೆರವು ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ ಮಾಲೀಕನಿಗೆ ನೋಟಿಸ್ ನೀಡುವಂತೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *