ಕುಖ್ಯಾತ ಮನೆಗಳ್ಳರ ಬಂಧನ – 33 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ

Public TV
0 Min Read

ರಾಯಚೂರು: ಮನೆಯಲ್ಲಿ ಯಾರು ಇಲ್ಲ ಎಂಬುವುದನ್ನು ಗಮನಿಸಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಕಿಲಾಡಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಅಬ್ದುಲ್ ರೆಹಮಾನ್ ಮತ್ತು ಚಾಂದ್ ಪಾಷಾ ಬಂಧಿತ ಆರೋಪ. ಮತ್ತೊಬ್ಬ ಕಳ್ಳ ತಲೆಮರೆಸಿಕೊಂಡಿದ್ದು ಪೊಲೀಸರು ಅವನಿಗೆ ಬಲೆ ಬಿಸಿದ್ದಾರೆ.

ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬೀಗ ಮುರಿದು ಮನೆಯನ್ನು ದೋಚುತ್ತಿದ್ದ ಕಳ್ಳರನ್ನು ಸಿಂಧನೂರು ನಗರದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 33 ಲಕ್ಷ ರೂ ಮೌಲ್ಯದ 110 ಗ್ರಾಂ ಚಿನ್ನ, 260 ಗ್ರಾಂ ಬೆಳ್ಳಿ ಮತ್ತು 60 ಸಾವಿರ ರೂ. ನಗದನ್ನು ಪೊಲೀಸರು ಜಪ್ತಿಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *